Advertisement

Fraud: ಚಿನ್ನಾಭರಣ ಹಿಂದಿರುಗಿಸದೆ ವಂಚನೆ; ಪ್ರಕರಣ ದಾಖಲು

01:05 AM Nov 10, 2023 | Team Udayavani |

ಬಂಟ್ವಾಳ: ವಿವಾಹ ನಿಶ್ಚಿತಾರ್ಥದ ಹಿನ್ನೆಲೆ ಕಳೆದ ಎಪ್ರಿಲ್‌ನಲ್ಲಿ ಯುವತಿಯೋರ್ವಳು ತನ್ನನ್ನು ಮದುವೆಯಾಗುವ ಯುವಕನ ಜತೆ ಬಂದು ಸ್ನೇಹಿತೆಯಿಂದ ಚಿನ್ನಾಭರಣ ಪಡೆದುಕೊಂಡು ಹಿಂದಿರುಗಿಸದೆ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಬಿ.ಸಿ. ರೋಡು ನಿವಾಸಿ ಸಂಧ್ಯಾ ವಂಚನೆಗೊಳಗಾದ ಮಹಿಳೆಯಾಗಿದ್ದು, ಆರೋಪಿಗಳಾದ ಅಶ್ವಿ‌ನಿ ಹಾಗೂ ಶ್ರೀಕಾಂತ್‌ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂಧ್ಯಾ ಅವರು ಕಳೆದ ಎಪ್ರಿಲ್‌ 23ರಂದು ವಿದೇಶಕ್ಕೆ ತೆರಳಲು ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಸಂದರ್ಭ ಆಕೆಯ ಸ್ನೇಹಿತೆ ಅಶ್ವಿ‌ನಿ, ಯುವಕ ಶ್ರೀಕಾಂತ್‌ನ ಜತೆಗೆ ಬಂದು ತನ್ನನ್ನು ಮದುವೆಯಾಗುವ ಯುವಕ ಎಂದು ಪರಿಚಯಿಸಿಕೊಂಡಿದ್ದಾಳೆ.

ಬಳಿಕ ತಮ್ಮ ವಿವಾಹ ನಿಶ್ಚಿತಾರ್ಥಕ್ಕೆ ಚಿನ್ನಾಭರಣ ನೀಡುವಂತೆ ವಿನಂತಿಸಿದ್ದು, ಅದರಂತೆ ಸಂಧ್ಯಾ ಅವರು ತಮ್ಮ ಆಭರಣಗಳನ್ನು ಅಶ್ವಿ‌ನಿಗೆ ನೀಡುವಂತೆ ತಾಯಿಯ ಬಳಿ ಹೇಳಿದ್ದು, ಅವರು ನೀಡಿರುತ್ತಾರೆ.

ಸುಮಾರು 32.70 ಗ್ರಾಂ ತೂಕದ ಚಿನ್ನದ ನಕ್ಲೇಸ್‌, 15.10 ಗ್ರಾಂ ತೂಕದ ಚಿನ್ನದ ಕೈ ಬಳೆ, 2.20 ಗ್ರಾಂ ತೂಕದ ವಜ್ರದ ಒಂದು ಜತೆ ಕಿವಿಯೋಲೆ, 17.20 ಗ್ರಾಂನ ಚಿನ್ನದ ಕೈ ಬಳೆ, ತಲಾ 1 ಪವನ್‌ ತೂಕದ ಚಿನ್ನದ ಬಳೆ, ಚಿನ್ನದ ಪೆಂಡೆಂಟ್‌ ಹಾಗೂ ಚಿನ್ನದ ರಿಂಗ್‌, 19 ಗ್ರಾಂ ತೂಕದ ಚಿನ್ನದ ಸರ ಪಡೆದುಕೊಂಡು ಸಾಕಷ್ಟು ಬಾರಿ ಕೇಳಿದರೂ ಹಿಂದಿರುಗಿಸಿಲ್ಲ. ಆದರೆ ಕಳೆದ ಅ. 26ರಂದು ಆಭರಣಗಳಲ್ಲಿ 17.2 ಗ್ರಾಂನ ಕೈ ಬಳೆ ಹಾಗೂ ತಲಾ ಒಂದು ಪವನ್‌ ತೂಕದ ಚಿನ್ನದ ಪೆಂಡೆಂಟ, ಉಂಗುರವನ್ನು ಮಾತ್ರ ಹಿಂದಿರುಗಿಸಿರುತ್ತಾರೆ. ಪ್ರಸ್ತುತ ಸಂಧ್ಯಾ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next