Advertisement

ಹಿಜಾಬ್‌ ಹೆಸರಿನಲ್ಲಿ ಶಿಕ್ಷಣದಿಂದ ವಂಚನೆ ಸಲ್ಲ

01:33 PM Feb 06, 2022 | Team Udayavani |

ಸಿರವಾರ: ಕುಂದಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ ನಿಷೇಧದ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುತ್ತಿರುವ ಪ್ರಾಚಾರ್ಯರ ವಿರುದ್ಧ ಕ್ರಮ ಜರುಗಿಸುವಂತೆ ಅಂಜುಮನ್‌ ಕಮಿಟಿ ವತಿಯಿಂದ ಒತ್ತಾಯಿಸಲಾಯಿತು.

Advertisement

ಮುಸ್ಲಿಂ ಧರ್ಮದಲ್ಲಿ ಹಿಜಾಬ್‌ ಎಂಬುವುದು ಕಡ್ಡಾಯವಾಗಿ ಪಾಲನೆ ಮಾಡಬೇಕಾದ ಅಂಶ. ಮುಸ್ಲಿಂ ಧರ್ಮದ ಯಾವುದೇ ಹೆಣ್ಣು ಮಗಳು ವಯಸ್ಕಳಾದ ಮೇಲೆ ಅನ್ಯರಿಗೆ ಮುಖ ಮತ್ತು ಕೈಗಳನ್ನು ಮಾತ್ರ ತೋರಿಸಬೇಕು ಎಂಬುವುದು ಪ್ರಮುಖ ಅಂಶವಾಗಿದೆ. ನಮ್ಮ ಹೆಣ್ಣು ಮಕ್ಕಳು ಹಿಜಾಬ್‌ ಧರಿಸಿಕೊಂಡು ಬರುತ್ತಿದ್ದು, ಇದು ನಮ್ಮ ಮೂಲಭೂತ ಹಕ್ಕಾಗಿದೆ. ಇದನ್ನು ಕಸಿದುಕೊಳ್ಳಲು ಹೊರಟಿರುವುದು ಖಂಡನೀಯ. ಈ ರೀತಿ ವಿದ್ಯಾರ್ಥಿಗಳನ್ನು ವಿದ್ಯಾಭ್ಯಾಸದಿಂದ ದೂರ ಇಡುತ್ತಿರುವ ಕಾಲೇಜಿನ ಪ್ರಾಚಾರ್ಯರನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್‌-2 ತಹಶೀಲ್ದಾರ್‌ ಪರಶುರಾಮ್‌ ಅವರಿಗೆ ಸಲ್ಲಿಸಲಾಯಿತು. ಕಮಿಟಿಯ ಅಧ್ಯಕ್ಷ ಮಹಮ್ಮದ್‌ ವಲಿ ಗುತ್ತೇದಾರ್‌, ಸತ್ತರ್‌ಸಾಬ್‌, ಇಬ್ರಾಹಿಂ, ರಾಜಾ ಬಗ್ಗೆ, ಅಜ್ಮೀರ್‌, ಬಾಹುದ್ದೀನ್‌, ರಜಾಕ್‌, ರಫಿ, ಚಾಂದ್‌, ಇಸ್ಮಾಯಿಲ್‌, ಮರಿಯಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next