Advertisement

ನಾಲೆಗೆ ಬಿದ್ದು ನಾಲ್ವರು ಸಾವು

07:10 AM Aug 07, 2018 | |

ಪಿರಿಯಾಪಟ್ಟಣ: ತಾಲೂಕಿನ ದೊಡ್ಡ ಕಮರವಳ್ಳಿ (ಮರಟಿ ಕೊಪ್ಪಲು)ಹಾರಂಗಿ ನಾಲೆಯ ಏರಿಯ ಮೇಲೆ ಮಾರುತಿ ವ್ಯಾನ್‌ ಆಯತಪ್ಪಿ ಉರುಳಿ ಒಂದೇ ಕುಟುಂಬದ ನಾಲ್ವರು ಜಲ ಸಮಾಧಿಯಾಗಿದ್ದಾರೆ.

Advertisement

ಪಿರಿಯಾಪಟ್ಟಣದ ಲಕ್ಷ್ಮೀಪುರದಲ್ಲಿ ವಾಸವಾಗಿದ್ದ ಪಳನಿಸ್ವಾಮಿ (40), ಪತ್ನಿ ಸಂಜು(35),ಮಗ ನಿಖೀತ್‌ (12), ಪುತ್ರಿ ಪೂರ್ಣಿಮಾ (14) ಮೃತರು. ಮೃತರು ಕೊಡಗು ಜಿಲ್ಲೆ ನಾಪೋಕ್ಲುನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇವರ ಮಕ್ಕಳು
ಅಂಗವಿಕಲರಾಗಿದ್ದು ಇವರಿಗೆ ದೊಡ್ಡಕವರವಳ್ಳಿ ಅಂಚೆ ಕಚೇರಿಯಲ್ಲಿ ಸರ್ಕಾರದಿಂದ ಬರುವ ಅಂಗವಿಕಲರ ವೇತನ ಪಡೆಯಲು ಗ್ರಾಮಕ್ಕೆ ಬರುತ್ತಿದ್ದ ವೇಳೆ ಹಾರಂಗಿ ನಾಲೆಯ ಏರಿ ಮೇಲೆ ವಾಹನ ತಿರುಗಿಸಲು ಹೋಗಿ ದುರ್ಘ‌ಟನೆ ಜರುಗಿದೆ.ಸ್ಥಳದಲ್ಲಿದ್ದ ಗ್ರಾಮಸ್ಥರು ಅವರನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗಿಲ್ಲ. ಬಳಿಕ, ಸ್ಥಳಕ್ಕೆ ಆಗಮಿಸಿದ ಬೆಟ್ಟದಪುರ ಪೋಲಿಸರು ಮೃತದೇಹಗಳನ್ನು ಮತ್ತು ವ್ಯಾನ್‌ಅನ್ನು ಸ್ಥಳೀಯರ ನೇರವಿನಿಂದ ಹೊರತೆಗೆದಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next