Advertisement

ಬಸ್‌ ನಿಲ್ದಾಣದ ಕಾಂಕ್ರೀಟ್‌ ಸೂರು ಕುಸಿದು ನಾಲ್ವರ ಸಾವು

05:42 PM Sep 07, 2017 | Team Udayavani |

ಕೊಯಮುತ್ತೂರು : ಕೊಯಮುತ್ತೂರಿನ ಸೋಮನೂರು ಬಸ್‌ ನಿಲ್ದಾಣದ ಕಾಂಕ್ರೀಟ್‌ ಕುಸಿದು ಬಿದ್ದ ಕಾರಣ ಅದರಡಿ ನಿಂತಿದ್ದ ನಾಲ್ಕು ಮೃತ ಮಂದಿ ಮೃತಪಟ್ಟ ಇತರ ಏಳು ಮಂದಿ ಗಾಯಗೊಂಡ ಘಟನೆ ಇಂದು ಗುರುವಾರ ನಡೆದಿರುವುದಾಗಿ ಅಗ್ನಿ ಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.

Advertisement

ಮುಖ್ಯ ಬಸ್‌ ನಿಲ್ದಾಣದಲ್ಲಿ ಸುಮಾರು 100 ಅಡಿ ಉದ್ದ  ಕಾಂಕ್ರೀಟ್‌ ಸೂರನ್ನು ಮುಖ್ಯ ಕಟ್ಟಡದಿಂದ 15 ಅಡಿ ದೂರದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಲಾಗಿತ್ತು. 

ಸೂರು ಕುಸಿದು ಬಿದ್ದ ಪರಿಣಾಮವಾಗಿ ಸೂರಿನಡಿ ನಿಂತಿದ್ದವರ ಪೈಕಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಅಸುನೀಗಿದರು. ಇತರ ಏಳು ಮಂದಿ ಗಾಯಗೊಂಡರು.

ಕಳೆದೆರಡು ದಿನಗಳಿಂದ ಕೊಯಮುತ್ತೂರಿನಲ್ಲಿ ಜಡಿ ಮಳೆಯಾಗುತ್ತಿದ್ದು ಇದರ ಪರಿಣಾಮವಾಗಿ ಕಾಂಕ್ರೀಟ್‌ ಸೂರು ದುರ್ಬಲಗೊಂಡು ಕುಸಿದಿರಬಹುದು ಎನ್ನಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next