Advertisement

2 ಕ್ಷೇತ್ರದಲ್ಲೂ ಸೋಲು ಖಚಿತ!ಸಿದ್ರಾಮಣ್ಣ ಸಾಕು:ಮತ್ತೆ ಪೂಜಾರಿ ಕಿಡಿ

04:40 PM Mar 14, 2017 | Team Udayavani |

ಮಂಗಳೂರು : ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ  ಮತ್ತೆ ಕಿಡಿ ಕಾರಿದ್ದಾರೆ. 

Advertisement

ಉಪಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಸೋಲುತ್ತದೆ. ಇದಕ್ಕೆ ಬೇರೆ ಯಾರು ಬೇಡ ಸಿದ್ದರಾಮಯ್ಯನವರೇ ಸಾಕು ಎಂದು ಭವಿಷ್ಯ ನುಡಿದರು.

ಸಿದ್ಧರಾಮಣ್ಣ ಬದಲಾಗಬೇಕು..ಏಕೆ ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಕೈ ಬಿಟ್ಟಿರಿ,ಅವರತ್ರ ಏನೂ ಇಲ್ಲವಾ? ಅವರು ದಲಿತರಿಗೆ ಮಾತ್ರ ನಾಯಕರ ? ಎಲ್ಲರಿಗೂ ನಾಯಕ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಾನು ತಲೆ ಸರಿ ಇಲ್ಲದೆ ಹೇಳುವುದಲ್ಲ, ಸಿದ್ದರಾಮಣ್ಣ ಬದಲಾಗಬೇಕು..ಈಗಲೂ ಹೈಕಮಾಂಡ್‌ಗೆ ಹೇಳುತ್ತೇನೆ ಪರಮೇಶ್ವರ್‌ ಅವರನ್ನು ಸಿಎಂ ಮಾಡಿ ಎಲ್ಲವೂ ಸರಿಯಾಗುತ್ತದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next