Advertisement

ಎಲ್ಲಕ್ಕೂ ಸುಪ್ರೀಂ ಬೇಡ

08:55 AM Oct 09, 2018 | Team Udayavani |

ಹೈದರಾಬಾದ್‌ : ಪ್ರತಿಯೊಂದು ವ್ಯಾಜ್ಯಗಳ ಇತ್ಯರ್ಥಕ್ಕೂ ಸುಪ್ರೀಂ ಕೋರ್ಟ್‌ ಕದ ತಟ್ಟುವ ವ್ಯವಸ್ಥೆ ಬದಲಾಗಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಕೆಳ ಹಂತದ ನ್ಯಾಯಾಲಯಗಳಲ್ಲೇ ಬಗೆಹರಿಯಬಹುದಾದ ಪ್ರಕರಣಗಳೂ ಅನವಶ್ಯವಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತಿವೆ ಎಂದು ಖೇದ ವ್ಯಕ್ತಪಡಿಸಿರುವ ಅವರು, ಸಂವಿಧಾನದ ಸಮರ್ಪಕ ವ್ಯಾಖ್ಯಾನ ಹಾಗೂ ಇನ್ನಿತರ ವಿಶೇಷ ಪ್ರಕರಣಗಳಲ್ಲಿ ಮಾತ್ರ ಸುಪ್ರೀಂ ಕೋರ್ಟ್‌ ಪರಮೋಚ್ಚ ನ್ಯಾಯಾಲಯ ಆಗಿರಬೇಕು. ಸಾಮಾನ್ಯ ಪ್ರಕರಣಗಳಿಗೆ ಆಯಾ ರಾಜ್ಯಗಳ ಹೈಕೋರ್ಟ್‌ಗಳು ನೀಡಿದ ತೀರ್ಪುಗಳೇ ಅಂತಿಮವಾಗಬೇಕು’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next