Advertisement

ಕೊಳೆತ ಸ್ಥಿತಿಯಲ್ಲಿ ಮಾಜಿ ರಣಜಿ ಕ್ರಿಕೆಟಿಗನ ಶವ ಪತ್ತೆ: ಕೊಲೆ ಆರೋಪದಲ್ಲಿ ಮಗನ ಬಂಧನ

04:47 PM Jun 10, 2020 | keerthan |

ತಿರುವನಂತಪುರ: ಕೇರಳದ ಮಾಜಿ ಕ್ರಿಕೆಟಿಗ ಜಯಮೋಹನ್‌ ಥಾಂಪಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಅವರದ್ದೇ ಮನೆಯಲ್ಲಿ ಸೋಮವಾರ ಪತ್ತೆಯಾಗಿದೆ. ಸದ್ಯ ಕೊಲೆ ಆರೋಪದಲ್ಲಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಥಾಂಪಿ ಕೇರಳದ ಮನಕಾಡ್‌ನ‌ವರು. ಅವರ ಮಗ ಕೂಡ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಜಯಮೋಹನ್‌ ಥಾಂಪಿ

ಸಾವಿಗೀಡಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶವ ಕೊಳೆತು ವಾಸನೆ ಬರುತ್ತಿದ್ದರೂ ಮಗ ಸುಮ್ಮನೆ ಇದ್ದುದರಿಂದ ಅನುಮಾನಗೊಂಡ ಪೊಲೀಸರು ಮಗನನ್ನು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಜಯಮೋಹನ್ ಥಂಪಿ ಮಗ ಅಶ್ವಿನ್ ಅವರನ್ನು ಪೊಲೀಸರು ಬಂಧಿಸಿದ್ದು, ಸಹಾಯ ಮಾಡಿದ ಕಾರಣಕ್ಕೆ ನೆರೆಮನೆಯ ಯುವಕನನ್ನೂ ವಶಕ್ಕೆ ಪಡೆಯಲಾಗಿದೆ.

64 ವರ್ಷದ ಜಯಮೋಹನ್ ಅವರನ್ನು ಮಗ ಬಲವಾಗಿ ದೂಡಿದ ಕಾರಣ ಹಣೆಗೆ ಪೆಟ್ಟಾಗಿ ರಕ್ತಸ್ರಾವವಾಗಿ ಅವರು ಕೊನೆಯುಸಿರೆಳಿದಿದ್ದಾರೆ ಎನ್ನಲಾಗಿದೆ.

Advertisement

6 ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಕೇರಳ ತಂಡವನ್ನು ಜಯಮೋಹನ್‌ ಥಾಂಪಿ ಪ್ರತಿನಿಧಿಸಿದ್ದಾರೆ. ವಿಕೆಟ್‌ ಕೀಪರ್‌ -ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದರು ಎಂದು ಕೇರಳ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next