Advertisement

ಸಿದ್ಧ ರಾಮಯ್ಯರನ್ನು  ಸೋಲಿಸಿ: ಪೂಜಾರ

05:21 PM May 05, 2018 | Team Udayavani |

ಬಾದಾಮಿ: ಸಿಎಂ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರಕ್ಕೂ ಬರಲು ಯಾವುದೇ ವಿಶೇಷ ಪ್ಯಾಕೇಜ್‌ ನೀಡಿಲ್ಲ. ರಾಜಕೀಯ ಅಸ್ಥಿತ್ವಕ್ಕಾಗಿ ಮಾತ್ರ ಇಲ್ಲಿಗೆ ಬಂದಿರುವ ಸಿದ್ದರಾಮಯ್ಯನವರನ್ನು ಸೋಲಿಸಬೇಕು ಎಂದು ಮಾಜಿ ಶಾಸಕ ಪಿ.ಎಚ್‌.ಪೂಜಾರ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಬಾದಾಮಿ ಪ್ರವಾಸೋದ್ಯಮ ತಾಣವಾಗಿದ್ದರೂ ಕಳೆದ 5 ವರ್ಷಗಳಿಂದ ತಾವೇ ಸಿಎಂ ಆಗಿದ್ದರೂ ಸಹಿತ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಬಾದಾಮಿಯಲ್ಲಿ ಹಾಳು ಕೊಂಪೆ ಮಾಡಿದ್ದಾರೆ. ಅವರಿಗೆ ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ರೈತರ ಜೀವನಾಡಿಯಾದ ಮಹದಾಯಿ ವಿಷಯದಲ್ಲಿ ಸಂಪೂರ್ಣವಾಗಿ ಎಡವಿದ್ದು, ರೈತ ವಿರೋಧಿ ಸರಕಾರವಾಗಿದೆ. ಯಾವ ಮುಖವನ್ನಿಟ್ಟುಕೊಂಡು ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ದಿಸಿದ್ದಾರೆ? ಎಂದು ಪ್ರಶ್ನಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಸೋಲಿನ ಭೀತಿಯಿಂದ ಬನಶಂಕರಿದೇವಿ ಕಾಲು ಹಿಡಿಯಲು ಬಂದಿರುವ ಸಿದ್ದರಾಮಯ್ಯನವರಿಗೆ ಬಾದಾಮಿ ಜನತೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು. ಕಾಡಾ ಮಾಜಿ ಅಧ್ಯಕ್ಷ ಬಿ.ಪಿ.ಹಳ್ಳೂರ ಮಾತನಾಡಿ, ಚಾಮುಂಡೇಶ್ವರಿ ಅಕ್ಕ, ಬನಶಂಕರಿ ದೇವಿ ತಂಗಿ ಇವರಿಬ್ಬರು ಸಿಎಂ ಸಿದ್ದರಾಮಯ್ಯನವರನ್ನು ಸೋಲಿಸಿ ಮನೆಗೆ ಕಳುಹಿಸಲಿದ್ದಾರೆ ಎಂದರು. ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈಶ್ವರಚಂದ್ರ ಹೊಸಮನಿ, ಶಂಭುಗೌಡ ಪಾಟೀಲ, ಡಾ.ಶಿವುಕುಮಾರ ಗಂಗಲ್ಲ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next