Advertisement

ಮಂಗಳೂರು ಕೆನರಾ ಕಾಲೇಜು ಮಾಜಿ ಪ್ರಾಂಶುಪಾಲ ಶಿವಾನಂದ್ ಭಟ್ ವಿಧಿವಶ

06:08 PM Oct 27, 2018 | Team Udayavani |

ಮಂಗಳೂರು: ಕೆನರಾ ಪ್ರಥಮ ದರ್ಜೆ ಕಾಲೇಜು ಮತ್ತು ಕೆನರಾ ಸಂಜೆ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದ ಪ್ರೊ. ಶಿವಾನಂದ ಭಟ್(67ವರ್ಷ) ಅವರು ಶುಕ್ರವಾರ ತಡರಾತ್ರಿ ಕದ್ರಿ ಮಲ್ಲಿಕಟ್ಟದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Advertisement

ಮೃತರು ಪತ್ನಿ ಶ್ಯಾಮಲಾ, ಇಬ್ಬರು ಪುತ್ರರು, ಪುತ್ರಿ ಶಿಲ್ಪಾ ಸೇರಿದಂತೆ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ. 1951ರ ಫೆಬ್ರುವರಿ 26ರಂದು ಶಿವಾನಂದ್ ಭಟ್ ಅವರು ಜನಿಸಿದ್ದರು. ಜೆಪ್ಪುವಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಬಳಿಕದ ವಿದ್ಯಾಭ್ಯಾಸ ಕೆನರಾ ಕಾಲೇಜಿನಲ್ಲಿ ಪೂರೈಸಿದ್ದು, 1973ರಲ್ಲಿ ಕೆನರಾ ಕಾಲೇಜಿನಲ್ಲಿಯೇ ಕಾಮರ್ಸ್ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. 2007ರಿಂದ 2011ರ ಫೆಬ್ರುವರಿ 28ರವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಕೆನರಾ ಸಂಜೆ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಕೇವಲ ಒಂದು ವರ್ಷ ಮಾತ್ರ ಪ್ರಾಂಶುಪಾಲರಾಗಿದ್ದು, ಬಳಿಕ ಆ ಸ್ಥಾನದಿಂದ ಕೆಳಗಿಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next