Advertisement

ವಿಚಾರಣೆ ತಪ್ಪಿಸಿದ ರಾಬ್ರಿ ದೇವಿ

07:20 AM Oct 12, 2017 | Harsha Rao |

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಬುಧವಾರ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಜಾರಿ ನಿರ್ದೇಶನಾಲಯ ಸತತ ಮೂರನೇ ಬಾರಿಗೆ ಅವರಿಗೆ ಸಮನ್ಸ್‌ ಕಳುಹಿಸಿತ್ತು. ವಿಚಾರಣೆ ಯಿಂದ ದೂರ ಉಳಿಯಲು ಅವರು ನಿಗದಿತ ಕಾರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ನೀಡಿದ್ದಾರೆಯೋ ಇಲ್ಲವೋ ಎನ್ನುವುದು ಗೊತ್ತಾಗಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪುತ್ರ ತೇಜಸ್ವಿ ಯಾದವ್‌ ಅವರನ್ನು ಜಾರಿ ನಿರ್ದೇಶನಾಲಯ ಒಟ್ಟು ಒಂಭತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಜುಲೈನಲ್ಲಿ ಸಿಬಿಐ ಲಾಲು ಕುಟುಂಬದ ಮೇಲೆ ಕೇಸು ದಾಖಲಿಸಿಕೊಂಡಿತ್ತು. ಜತೆಗೆ ದಾಳಿಯನ್ನೂ ನಡೆಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next