Advertisement

ದೇಶದ ರಕ್ಷಣೆಗಾಗಿ ಏಕೀಕೃತ ವಿರೋಧ ಪಕ್ಷ : TDP ಚಂದ್ರಬಾಬು ನಾಯ್ಡು

03:57 PM Nov 01, 2018 | Team Udayavani |

ಹೊಸದಿಲ್ಲಿ : ದೇಶದ ರಕ್ಷಣೆಗಾಗಿ ಏಕೀಕೃತ ವಿರೋಧ ಪಕ್ಷವನ್ನು ಕಟ್ಟುವುದೇ ನನ್ನ ಯೋಜನೆಯಾಗಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ  ಹಾಗೂ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿಕೊಂಡಿದ್ದಾರೆ. 

Advertisement

ನ್ಯಾಶನಲ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಮತ್ತು ನ್ಯಾಶನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನಾಯ್ಡು, ದೇಶದ ರಕ್ಷಣೆಗಾಗಿ ಏಕೀಕೃತ ವಿರೋಧ ಪಕ್ಷವನ್ನು ಕಟ್ಟುವುದೇ ನನ್ನ ಗುರಿಯಾಗಿದೆ ಎಂದು ಹೇಳಿದರು. 

ಈ ನಿಟ್ಟಿನಲ್ಲಿ ನಾನು ಇಂದೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದೇನೆ ಎಂದು ಹೇಳಿದರು. 

ಈ ಸಂಬಂಧ ದಿಲ್ಲಿಯಲ್ಲಿ ನಾವು ಭೇಟಿಯಾಗಿ ದೇಶದ  ಭವಿಷ್ಯವನ್ನು ಕಾಪಾಡುವುದಕ್ಕಾಗಿ ಯೋಜನೆಯೊಂದನ್ನು ರೂಪಿಸಲು ನಿರ್ಧರಿಸಿದ್ದೇವೆ ಎಂದು ನಾಯ್ದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next