Advertisement

 ಬಿಜೆಪಿ ನಿರ್ವಹಣಾ ಸಮಿತಿ ರಚನೆ 

12:30 AM Mar 14, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪ್ರಚಾರ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಯನ್ನು ಯೋಜಿತ ರೀತಿಯಲ್ಲಿ ಕಲ್ಪಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ರಚನೆಯಾಗಿದೆ.

Advertisement

ಸಮಿತಿಗೆ ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌ ಸಂಚಾಲಕರಾಗಿದ್ದು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಸುಬ್ಬನರಸಿಂಹ ಅವರು ಸಹ ಸಂಚಾಲಕರಾಗಿದ್ದಾರೆ. ಮಾಧ್ಯಮ ವಿಭಾಗಕ್ಕೆ ಎ.ಎಚ್‌.ಆನಂದ್‌ ಸಂಚಾಲಕರಾಗಿದ್ದು, ಎಸ್‌.ಪ್ರಕಾಶ್‌ ಸಹ ಸಂಚಾಲಕರಾಗಿದ್ದಾರೆ. ಮಾಧ್ಯಮ ಸಮನ್ವಯ ವಿಭಾಗದ ಪ್ರಮುಖ್‌ ಆಗಿ ಎಂ.ಎಚ್‌. ಶ್ರೀಧರ್‌ ಅವರನ್ನು ನೇಮಿಸಲಾಗಿದೆ. ಹಣಕಾಸು ನಿರ್ವಹಣೆ ವಿಭಾಗದ ಪ್ರಮುಖ್‌ ಸುಬ್ಬನರಸಿಂಹ, ಸಹ ಪ್ರಮುಖ್‌ ಲೆಹರ್‌ ಸಿಂಗ್‌ ನೇಮಕಗೊಂಡಿದ್ದಾರೆ. ಪ್ರಣಾಳಿಕೆ ವಿಭಾಗದ ಸಂಚಾಲಕರಾಗಿ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಸಹ ಸಂಚಾಲಕರಾಗಿ ಡಾ.ಅಶ್ವತ್ಥ ನಾರಾಯಣ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಮದನ್‌ ಗೋಪಾಲ್‌, ಸಿ.ಸೋಮಶೇಖರ್‌, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ,ರವೀಂದ್ರಪೈ ನೇಮಕವಾಗಿದ್ದಾರೆ.

ಹೈಟೆಕ್‌ ಪ್ರಚಾರ ಹಾಗೂ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಪ್ರದೀಪ್‌, ಬಾಲಾಜಿ ಶ್ರೀನಿವಾಸ್‌, ಸಿದ್ದು ಪುಂಡಿಹಾಳ್‌, ಪ್ರಶಾಂತ್‌ ಮಾಕನೂರು, ಗುರುಪ್ರಸಾದ್‌ ಅವರನ್ನು ನಿಯೋಜಿಸಲಾಗಿದೆ. ಮಹಿಳಾ ಕಾರ್ಯ ವಿಭಾಗಕ್ಕೆ ಭಾರತಿ ಶೆಟ್ಟಿ, ಶ್ರುತಿ,ತಾರಾ ಅನುರಾಧ, ಮಂಜುಳಾ, ಡಾ.ತೇಜಸ್ವಿನಿ ಗೌಡ ಅವರನ್ನುನೇಮಿಸಲಾಗಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ನಡೆಸಿದ ಯಡಿಯೂರಪ್ಪ ಅವರು ಎಲ್ಲ ವಿಭಾಗಗಳು ಕಾರ್ಯ ಯೋಜನೆಯನ್ನು ರೂಪಿಸಿ ತಕ್ಷಣದಿಂದ ಕಾರ್ಯಪ್ರವೃತ್ತರಾಗುವಂತೆಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next