Advertisement

Formal Welcome: 54 ದಿನಗಳ ಬಳಿಕ ಮುಖ್ಯಮಂತ್ರಿ- ರಾಜ್ಯಪಾಲರು ಮುಖಾಮುಖಿ

05:17 AM Oct 10, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣದ ವಿಷಯಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವ ಕಾರಣಕ್ಕೆ ರಾಜ್ಯಪಾಲರು ಮತ್ತು ರಾಜಭವನದಿಂದ ಅಂತರ ಕಾಯ್ದುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 54 ದಿನಗಳ ಬಳಿಕ ಬುಧವಾರ ರಾಜಭವನಕ್ಕೆ ಭೇಟಿ ಕೊಟ್ಟು, ರಾಜ್ಯಪಾಲರಿಗೆ ಹಸ್ತಲಾಘವ ನೀಡಿದ್ದಾರೆ.

Advertisement

ಮುಖ್ಯಮಂತ್ರಿಯವರು ಕೊನೆಯ ಬಾರಿಗೆ ರಾಜಭವನಕ್ಕೆ ಭೇಟಿ ನೀಡಿದ್ದು ಆ. 15ರಂದು ಸ್ವಾತಂತ್ರೋತ್ಸವದ ಅಂಗವಾಗಿ ರಾಜ್ಯಪಾಲರು ಹಮ್ಮಿಕೊಳ್ಳುವ ಉಪಾಹಾರ ಕೂಟದಲ್ಲಿ ಪಾಲ್ಗೊಳ್ಳಲು. ಅದಾದ ಬಳಿಕ ಬುಧವಾರ ಅ.9ರಂದು ಭೇಟಿ ಕೊಟ್ಟಿದ್ದಾರೆ.

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ನೇತೃತ್ವದ ನಿಯೋಗ ಬೆಂಗಳೂರು ಪ್ರವಾಸದ ಹಿನ್ನೆಲೆಯಲ್ಲಿ ಬುಧವಾರ ರಾಜ ಭವನಕ್ಕೆ ಆಗಮಿಸಿದ ಪ್ರಯುಕ್ತ ಅವರಿಗೆ ರಾಜ್ಯ ಆತಿಥ್ಯ ಶಿಷ್ಟಾಚಾರದಂತೆ ಔಪಚಾರಿಕ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅದರಲ್ಲಿ ಭಾಗವಹಿಸಲು ಸಿದ್ದರಾಮಯ್ಯ ರಾಜಭವನಕ್ಕೆ ತೆರಳಿದ್ದರು. ಅಲ್ಲಿ ರಾಜ್ಯಪಾಲರನ್ನು ಮುಖಾಮುಖಿಯಾಗಿ ನಗುಮುಖದೊಂದಿಗೆ ಹಸ್ತಲಾಘವ ಮಾಡಿದರು. ರಾಜ್ಯಪಾಲರು ಕೂಡ ಅದೇ ನಗುವಿನೊಂದಿಗೆ ಪ್ರತಿಕ್ರಿಯೆ ನೀಡಿದರು. ಬಳಿಕ ರಾಜ್ಯಪಾಲರೊಂದಿಗೆ ಸಿಎಂ ವೇದಿಕೆಯನ್ನೂ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next