Advertisement

ಅರಣ್ಯ ಇಲಾಖೆ ಅಡ್ಡಿ: ವಿಜಯನಗರ ಕಾಲುವೆ ದುರಸ್ತಿ ಸ್ಥಗಿತ ಆತಂಕದಲ್ಲಿ ರೈತರು

09:36 PM Jun 06, 2022 | Team Udayavani |

ಗಂಗಾವತಿ :ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ಈಗಾಗಲೇ ಶೇಕಡಾ 50 ರಷ್ಟು ಮುಗಿದಿದ್ದು ಇದೀಗ ಗಂಗಾವತಿ ತಾಲೂಕಿನ ಸಣಾಪುರ ಹತ್ತಿರ ಇರುವ ವಿಜಯನಗರ ಕಾಲುವೆಯ ದುರಸ್ತಿ ಕಾರ್ಯ ನಡೆದಿದೆ ಈ ಮಧ್ಯೆ ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಕಾಲುವೆ ದುರಸ್ತಿ ಕಾರ್ಯ ಕಳೆದ ವಾರದಿಂದ ನಿಲುಗಡೆಯಾಗಿದೆ.

Advertisement

ಸಣಾಪುರ ಗ್ರಾಮದ ಸರ್ವೆ ನಂಬರ್ 1ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ ಈ ವ್ಯಾಪ್ತಿಯಲ್ಲಿ ವಿಜಯನಗರ ಕಾಲುವೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣವಾಗಿದ್ದು ಇದೀಗ ಶಾಶ್ವತ ದುರಸ್ತಿ ಕಾರ್ಯ ನಡೆಯುತ್ತಿದೆ .ಇದು ಗುಡ್ಡ ಪ್ರದೇಶವಾಗಿರುವುದರಿಂದ ಕಾಲುವೆಯಲ್ಲಿ ಅಲ್ಲಲ್ಲಿ ಕಲ್ಲು ಬಂಡೆಗಳು ಬರುತ್ತಿವೆ ಇದನ್ನು ಕಂಪ್ರೈಸರ್ ಮಿಷನ್ ನಿಂದ ತೆರವುಗೊಳಿಸಿ ಕಾಲುವೆಯ ಗುತ್ತಿಗೆ ಪಡೆದ ಗುತ್ತಿಗೆದಾರರು ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಇದಕ್ಕೆ ಅಡ್ಡಿಪಡಿಸಿ ಕಂಪ್ರೆಸ್ಸರ್ ಟ್ರ್ಯಾಕ್ಟರನ್ನು ಈಗಾಗಲೇ ವಶಕ್ಕೆ ಪಡೆದು ಕಾಮಗಾರಿ ನಿಲುಗಡೆ ಮಾಡುವಂತೆ ಸೂಚನೆ ನೀಡಿದ್ದರಿಂದ 1ವಾರದಿಂದ ವಿಜಯನಗರ ಸಣಾಪುರ ಕಾಲುವೆ ದುರಸ್ತಿ ಕಾರ್ಯ ಸ್ಥಗಿತಗೊಂಡಿದೆ .

ಈ ಮಧ್ಯೆ ತುಂಗಭದ್ರಾ ಡ್ಯಾಂನ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಈಗಾಗಲೇ ಡ್ಯಾಮ್ ಗೆ ಅರ್ಧದಷ್ಟು ನೀರು ಹರಿದು ಬರುತ್ತಿದ್ದು ಈ ಬಾರಿ ಮುಂಗಾರು ಭತ್ತದ ನಾಟಿ ಮತ್ತು ಇತರ ಬೆಳೆಗಳ ಬಿತ್ತನೆ ಕಾರ್ಯ ಬೇಗನೆ ಆಗುವ ಸಂಭವವಿದೆ .ವಿಜಯನಗರ ಕಾಲುವೆಗಳ ವ್ಯಾಪ್ತಿಯಲ್ಲಿ ಸುಮಾರು ಹತ್ತು ಸಾವಿರ ಎಕರೆ ಭೂಮಿ ಇದ್ದು .ಜೂನ್ ಮತ್ತು ಜುಲೈ ಮಧ್ಯಭಾಗದಲ್ಲಿ ಭತ್ತ ನಾಟಿ ಕಾರ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ನೀರು ಬೇಕಾಗುತ್ತದೆ .ಸಣಾಪುರ ಆನೆಗೊಂದಿ ಭಾಗ ಹಂಪಿ ವಿಶ್ವಪರಂಪರೆ ಪಟ್ಟಿಗೆ ವ್ಯಾಪ್ತಿಯಲ್ಲಿರುವುದರಿಂದ ಜಲಸಂಪನ್ಮೂಲ ಇಲಾಖೆ ಅರಣ್ಯ ಇಲಾಖೆ ಮತ್ತು ಕಾಮಗಾರಿಯನ್ನು ಗುತ್ತಿಗೆ ಪಡೆದವರು ಮುಂಚಿತವಾಗಿಯೇ ಈ ಭಾಗದಲ್ಲಿರುವ ಕಾನೂನು ತೊಡಕು ನಿವಾರಿಸಿಕೊಂಡು ಕಾಮಗಾರಿ ಆರಂಭಿಸಬೇಕಿತ್ತು .ಇಲಾಖೆಗಳ ಪರಸ್ಪರ ಪ್ರತಿಷ್ಠೆಯಿಂದಾಗಿ ಇದೀಗ ವಿಜಯನಗರ ಕಾಲುವೆಯ ಕಾಮಗಾರಿ ಸ್ಥಗಿತಗೊಂಡಿದೆ .ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶ ಮಾಡಿ ಇಲ್ಲಿರುವ ಕಾನೂನು ತೊಡಕು ನಿವಾರಿಸಿ ವಿಜಯನಗರ ಕಾಲುವೆ ಸಾಣಾಪುರ ಭಾಗದಿಂದ ಸಂಗಾಪುರದ ವರೆಗೆ ಶಾಶ್ವತ ದುರಸ್ತಿ ಕಾರ್ಯ ಬೇಗನೆ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಬೇಕಿದೆ .

ವಿಜಯನಗರ ಕಾಲುವೆಗಳು ವಿಜಯನಗರ ಸಾಮ್ರಾಜ್ಯದ ಅರಸರು ನಿರ್ಮಿಸಿ ಆನೆಗೊಂದಿ ಭಾಗದ ಹಳ್ಳಿಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದರು .ಈ ಭಾಗದಲ್ಲಿರುವ ಕೋತಿ ಸೇರಿದಂತೆ ಪ್ರಾಣಿ ಪಕ್ಷಿಗಳಿಗೆ ಹಣ್ಣುಗಳ ಆಹಾರದ ವ್ಯವಸ್ಥೆ ಮಾಡಲು ಇಲ್ಲಿ ಹೆಚ್ಚಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿತ್ತು .ಇತ್ತೀಚಿನ ದಶಕಗಳಲ್ಲಿ ಬಾಳೆ ಭತ್ತ ಸೇರಿದಂತೆ ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ .
ವಿಜಯನಗರ ಕಾಲುವೆಗಳ ನಿರ್ಮಾಣ ಮಾಡಿ ಸುಮಾರು 5- 6ನೂರು ವರ್ಷಗಳಾಗಿದ್ದು ಈ ಕಾಲುವೆಗಳನ್ನು ಶಾಶ್ವತವಾಗಿ ಇಲ್ಲಿಯ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬರದಂತೆ ನಿರ್ಮಾಣ ಮಾಡುವಂತೆ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರು .2008 ರಲ್ಲಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ ನಂತರ ಕಾಂಗ್ರೆಸ್ ಸರ್ಕಾರ ವಿಜಯನಗರ ಕಾಲುವೆಗಳ ದುರಸ್ತಿಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ಟೆಂಡರ್ ಕರೆದು ಕಳೆದ ವರ್ಷ ಕಾಮಗಾರಿ ನಡೆಸಿತ್ತು ಈಗಾಗಲೇ ದೇವಘಾಟ್, ಮೋತಿ ಘಾಟ್, ಕಂಪ್ಲಿ, ಶಿವಪುರ ಸೇರಿದಂತೆ ಹೊಸಪೇಟೆ ಭಾಗದ ವಿಜಯನಗರ ಕಾಲುವೆಗಳ ದುರಸ್ತಿ ಕಾರ್ಯ ಬಹುತೇಕ ಮುಗಿದಿದೆ.

ಕೂಡಲೇ ಜಲಸಂಪನ್ಮೂಲ ಇಲಾಖೆ ಅರಣ್ಯ ಇಲಾಖೆ ಮತ್ತು ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಮಧ್ಯಪ್ರವೇಶ ಮಾಡಿ ವಿಜಯನಗರ ಕಾಲುವೆ ಸೋನಾಪುರದಿಂದ ಸಂಗಾಪುರ ಇದುವರೆಗೂ ಶಾಶ್ವತ ದುರಸ್ತಿ ಕಾರ್ಯ ಗುಣಮಟ್ಟದಲ್ಲಿ ಬೇಗನೆ ಮುಗಿಸಬೇಕು ಮುಂಗಾರು ಹಂಗಾಮಿನಲ್ಲಿ ಭತ್ತ ನಾಟಿ ಸೇರಿದಂತೆ ರೈತರು ಇತರ ಬೆಳೆಗಳನ್ನು ಬೆಳೆಯಲು ಇದು ಅವಶ್ಯವಾಗಿದೆ .ಪರಸ್ಪರ ಮಾತುಕತೆಯ ಮೂಲಕ ನಿಯಮಗಳನ್ನು ಪಾಲಿಸಿ ಬೇಗನೆ ಕಾಮಗಾರಿ ಮುಗಿಸುವಂತೆ ಆನೆಗೊಂದಿ, ಸಣಾಪುರ ,ಜಂಗ್ಲಿ ಹನುಮನಹಳ್ಳಿ ಭಾಗದ ರೈತರು ಒತ್ತಾಯಿಸಿದ್ದಾರೆ .

Advertisement

ವಿಶೇಷ ವರದಿ:ಕೆ. ನಿಂಗಜ್ಜ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next