Advertisement

ಪದ್ಮನಾಭನಗರದಲ್ಲಿ ಫಾರಿನ್‌ ರಿಟರ್ನ್ ಅಭ್ಯರ್ಥಿ?

12:33 PM Apr 03, 2018 | Team Udayavani |

ಬೆಂಗಳೂರು: ಪದ್ಮಾನಭನಗರ ವಿಧಾನಸಭೆ ಕ್ಷೇತ್ರದಲ್ಲಿ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಲು ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‌, ವಿದೇಶದಿಂದ ಮರಳಿರುವ ಉದ್ಯಮಿ ಎಂ.ಜಿ.ಬಾಲಾಜಿ ಎಂಬುವವರಿಗೆ ಟಿಕೆಟ್‌ ನೀಡಲು ಮುಂದಾಗಿದೆ.

Advertisement

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸೋಮವಾರ, ಬಾಲಾಜಿ ಅವರ ಸ್ವ-ವಿವರ ಪಡೆದುಕೊಂಡಿದ್ದು, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ವಿರುದ್ಧ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ಮಾಜಿ ಸಚಿವ ಆಸ್ಕರ್‌ ಫ‌ರ್ನಾಂಡಿಸ್‌ ಅವರಿಗೆ ತಾಂತ್ರಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ಬಾಲಾಜಿ, 1987ರಲ್ಲಿ ಅಮೆರಿಕದ ಮಿಚಿಗನ್‌ ವಿವಿಯಲ್ಲಿ ಪದವಿ ಪಡೆದು, ಅಮೆರಿಕ ಕನ್ನಡ ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.

ನಂತರ ಭಾರತಕ್ಕೆ ಬಂದು ಯುವ ಕಾಂಗ್ರೆಸ್‌ ಉಪಾಧ್ಯಕ್ಷರಾಗಿ ಎಐಸಿಸಿ ಮಟ್ಟದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2009ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡು ವೀಕ್ಷಕರಾಗಿ, ತೆಲಂಗಾಣ ರಾಜ್ಯಕ್ಕೆ ಎಐಸಿಸಿ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next