Advertisement

ಮಸೀದಿ ಮೇಲಿನ ಅನಧಿಕೃತ ಮೈಕ್‌ ತೆರವಿಗೆ ಒತ್ತಾಯ

03:22 PM Aug 29, 2022 | Team Udayavani |

ಬೀದರ: ಮಸೀದಿಗಳ ಮೇಲಿನ ಅನಧಿಕೃತ ಮೈಕ್‌ಗಳನ್ನು ಶೀಘ್ರ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.

Advertisement

ಸೇನೆಯ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ನೇತೃತ್ವದಲ್ಲಿ ಪ್ರಮುಖರು ಹೆಚ್ಚುವರಿ ಎಸ್‌ಪಿ ಮೇಘಣ್ಣನವರ್‌ ಅವರನ್ನು ಭೇಟಿ ಮಾಡಿ ಎಸ್‌ಪಿ ಅವರಿಗೆ ಬರೆದಿರುವ ಮನವಿ ಪತ್ರವನ್ನು ಸಲ್ಲಿಸಿದರು.

ಸುಪ್ರೀಂ ಕೋರ್ಟ್‌ ಹಾಗೂ ರಾಜ್ಯ ಸರ್ಕಾರದ ಆದೇಶ ಇದ್ದರೂ ಅನಧಿಕೃತ ಮೈಕ್‌ ಹಾವಳಿ, ಶಬ್ದ ಮಾಲಿನ್ಯದ ವಿರುದ್ಧ ಜಿಲ್ಲೆಯಲ್ಲಿ ಕ್ರಮ ಜರುಗಿಸದಿರುವುದು ಖಂಡನೀಯ. ಇದು ಸ್ಪಷ್ಟ ನ್ಯಾಯಾಂಗ ನಿಂದನೆಯಾಗಿದ್ದು, ಜತೆಗೆ ಇದರಿಂದ ವಿದ್ಯಾರ್ಥಿಗಳ, ರೋಗಿಗಳ ಮತ್ತು ಕಾರ್ಮಿಕರ ನೆಮ್ಮದಿ ಹಾಳಾಗುತ್ತಿದೆ. ಶಾಲೆ ಮತ್ತು ಆಸ್ಪತ್ರೆ, ಕಚೇರಿಗಳ ಕಾರ್ಯನಿರ್ವಹಣೆ ಕಷ್ಟದಾಯಕವಾಗಿದೆ ಎಂದು ದೂರಿದ್ದಾರೆ.

ಸರ್ಕಾರದ, ಸುಪ್ರೀಂ ಕೋರ್ಟ್‌ ಆದೇಶಕ್ಕೆ ಕಿಮ್ಮತ್ತು ನೀಡದಿರುವುದು ದೇಶದ ಕಾನೂನು, ಸಂವಿಧಾನಕ್ಕೆ ದ್ರೋಹ ಬಗೆದಂತಾಗುತ್ತದೆ. ತಕ್ಷಣವೇ ಜಿಲ್ಲೆಯಲ್ಲಿ ಅನ ಧಿಕೃತ ಮೈಕ್‌ ತೆರವುಗೊಳಿಸಿ ಸಾರ್ವಜನಿಕರ ನೆಮ್ಮದಿ ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next