Advertisement

Navyಗೆ ಸಂಧಾಯಕ್‌ ಬಲ: ಕಡಲ್ಗಳ್ಳರಿಗೆ ಸಚಿವ ರಾಜನಾಥ್‌ ಎಚ್ಚರಿಕೆ

01:08 AM Feb 04, 2024 | Team Udayavani |

ವಿಶಾಖಪಟ್ಟಣ: ನಾಲ್ಕು ಬೃಹತ್‌ ಕಣ್ಗಾವಲು ನೌಕೆಗಳ(ಎಸ್‌ವಿಎಲ್‌) ಪೈಕಿ ಒಂದಾದ ಐಎನ್‌ಎಸ್‌ ಸಂಧಾಯಕ್‌ ಅನ್ನು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಭಾರತೀಯ ನೌಕಾಪಡೆಗೆ ಸೇರ್ಪ ಡೆಗೊಳಿಸಿದ್ದಾರೆ.

Advertisement

ವಿಶಾಖಪಟ್ಟಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಜನಾಥ್‌ ಸಿಂಗ್‌, “ಎಸ್‌ವಿಎಲ್‌ ನೌಕೆಯು ನಮ್ಮ ದೇಶವನ್ನು ಮಾತ್ರವಲ್ಲದೇ, ಇತರರನ್ನೂ ರಕ್ಷಿಸಲಿದೆ. ಕಡಲ್ಗಳ್ಳರು ಮತ್ತು ಕಳ್ಳಸಾಗಣೆದಾರರನ್ನು ನಾವು ಸುಮ್ಮನೆ ಬಿಡುವುದಿಲ್ಲ’ ಎಂದಿದ್ದಾರೆ.

ಸುರಕ್ಷಿತ ಸಮುದ್ರ ಸಂಚಾರವನ್ನು ಸಕ್ರಿಯಗೊಳಿಸಲು, ಬಂದರುಗಳು, ನೇವಿಗೇಶನ್‌ ಚಾನೆಲ್‌ಗಳು, ಕರಾ ವಳಿ ಪ್ರದೇಶಗಳು ಮತ್ತು ಆಳ ಸಮುದ್ರದ ಪೂರ್ಣ ಪ್ರಮಾಣದ ಹೈಡ್ರೋಗ್ರಾಫಿಕ್‌ ಸಮೀಕ್ಷೆಗಳನ್ನು ನಡೆಸಲು ಮತ್ತು ಕಡಲ್ಗಳ್ಳತನ ತಡೆಯಲು ಐಎನ್‌ಎಸ್‌ ಸಂಧಾಯಕ್‌ ನೆರವಾಗಲಿದೆ ಎಂದು ರಕ್ಷಣ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next