Advertisement

ಲೋಕಸಭೇಲಿ ಗದ್ದಲ ಪ್ರಕರಣ; 6 ಕಾಂಗ್ರೆಸ್ ಸಂಸದರು ಐದು ದಿನ ಅಮಾನತು

03:10 PM Jul 24, 2017 | Team Udayavani |

ನವದೆಹಲಿ: ಬೋಫೋರ್ಸ್ ಹಗರಣ, ಗೋ ರಕ್ಷಕರ ಕುರಿತು ಲೋಕಸಭೆಯ ಕಲಾಪದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗದ್ದಲ ಎಬ್ಬಿಸಿ, ಸ್ಪೀಕರ್ ಕುರ್ಚಿಯತ್ತ ಕಾಗದ ತೂರಿದ್ದ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಆರು ಮಂದಿ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 5 ದಿನಗಳ ಕಾಲ ಅಮಾನತುಗೊಳಿಸಿದ್ದಾರೆ.

Advertisement

ಲೋಕಸಭೆಯಲ್ಲಿ ತೀವ್ರ ಕೋಲಾಹಲ ನಡೆಸಿ, ಕಾಗದದ ಚೂರುಗಳನ್ನು ತೂರಿ, ಶೂನ್ಯವೇಳೆಯ ಕಲಾಪವನ್ನು ಹಾಳುಗೆಡವಿದ ಹಿನ್ನೆಲೆಯಲ್ಲಿ ಆರು ಮಂದಿ ಕಾಂಗ್ರೆಸ್ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮುಂದಿನ ಐದು ದಿನಗಳ ಕಾಲ ನಡೆಯಲಿರುವ ಕಲಾಪದಿಂದ ಆರು ಮಂದಿ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next