Advertisement

ಮಹದಾಯಿಗಾಗಿ ಇಂದು ಸುವರ್ಣಸೌಧ ಬಳಿ ಧರಣಿ

06:35 AM Dec 13, 2018 | Team Udayavani |

ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಯೋಜನೆಯ ತ್ವರಿತ ಕ್ರಮಕ್ಕೆ ಒತ್ತಾಯಿಸಿ ಡಿ.13ರಂದು ಸುವರ್ಣಸೌಧದ ಬಳಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಲು ಮಹದಾಯಿ ಪಕ್ಷಾತೀತ ರೈತರ ಹೋರಾಟ ಸಮನ್ವಯ ಸಮಿತಿ ನಿರ್ಧರಿಸಿದೆ. 

Advertisement

ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕರಾದ ಅಮೃತ ಇಜಾರಿ, ಮಹೇಶ ಪತ್ತಾರ, ಸುಭಾಷ್‌ಚಂದ್ರ ಗೌಡ ಪಾಟೀಲ, ಕೇಂದ್ರ ಹಾಗೂ ರಾಜ್ಯ ಸರಕಾರ ಪರಿಸರ ಹಾಗೂ ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲು ಕೂಡಲೇ ಅಧಿಸೂಚನೆ ಹೊರಡಿಸ ಬೇಕೆಂದು ಒತ್ತಾಯಿಸಿದರು. 

ಮಹದಾಯಿ ನ್ಯಾಯಾಧಿಕರಣ ಮೂರು ತಿಂಗಳಹಿಂದೆಯೇ ಆದೇಶಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾಮಗಾರಿ ಕೈಗೆತ್ತಿಕೊಳ್ಳುವಲ್ಲಿ ನಿರ್ಲಕ್ಷé ತೋರುತ್ತಿವೆ. ಇದನ್ನು ವಿರೋಧಿಸಿ ಡಿ.13ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಸುವರ್ಣಸೌಧದ ಎದುರು ಒಂದು ಸಾವಿರಕ್ಕೂ ಅಧಿಕ ರೈತರು ಧರಣಿ ನಡೆಸಲಿದ್ದಾರೆ ಎಂದರು. ಮುಖಂಡರಾದ ಬಸಪ್ಪ ಬೀರಣ್ಣವರ, ಹೇಮನಗೌಡ ಬಸನಗೌಡ್ರ, ಕುಮಾರಸ್ವಾಮಿ ಹಿರೇಮಠ, ಸಂಜೀವ ಧುಮ್ಮಕನಾಳ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next