Advertisement
ಬುಧವಾರ ಮಾತನಾಡಿದ ಸಿಂಗ್, “ಕಥುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣ ಸಂಬಂಧ ದೀರ್ಘವಾದ ಮೌನ ವಹಿಸಿರುವ ಪ್ರಧಾನಿ ಮೋದಿ ಮಾತಾಡಬೇಕಿದೆ. ನನಗೆ ನೀಡುತ್ತಿದ್ದ ಸಲಹೆಯನ್ನು ಅವರು ಈಗ ಪಾಲಿಸಬೇಕಿದೆ’ ಎಂದಿದ್ದಾರೆ. ಮೋದಿ ಶುಕ್ರವಾರವಾದರೂ ಮೌನ ಮುರಿದರಲ್ಲ, ಅದಕ್ಕೆ ಸಂತೋಷ ಆಯಿತು. ನನ್ನನ್ನು ಮೌನಮೋಹನ್ಸಿಂಗ್ ಎನ್ನುತ್ತಿದ್ದವರು ಈಗ ಮಾತನಾಡಲಿ. ಘಟನೆ ನಡೆದ ಬೆನ್ನಲ್ಲೇ ಪ್ರತಿಕ್ರಿಯಿಸದಿದ್ದರೆ, ತಪ್ಪು ಮಾಡಿದರೂ ಯಾವುದೇ ಶಿಕ್ಷೆ ಎದುರಿಸಬೇಕಾಗಿಲ್ಲ ಎಂದು ಆರೋಪಿಗಳು ಭಾವಿಸತೊಡಗುತ್ತಾರೆ. ಅಧಿಕಾರದಲ್ಲಿದ್ದವರು ಸಮಯಕ್ಕೆ ಸರಿಯಾಗಿ ಮಾತನಾಡಲೇಬೇಕು ಎಂದು ಸಿಂಗ್ ಹೇಳಿದ್ದಾರೆ.
ಕಥುವಾ, ಉನ್ನಾವ್ ಮತ್ತು ಸೂರತ್ನಲ್ಲಿ ನಡೆದ ಅತ್ಯಾಚಾರ, ಹತ್ಯೆ ಪ್ರಕರಣಗಳನ್ನು ಖಂಡಿಸಿ ಬುಧವಾರ ನ್ಯೂಯಾರ್ಕ್ನಲ್ಲಿ 20ಕ್ಕೂ ಹೆಚ್ಚು ಸಂಘಟನೆಗಳು ಬೃಹತ್ ರ್ಯಾಲಿ ನಡೆಸಿದವು. “ನ್ಯಾಯಕ್ಕಾಗಿ ಒಗ್ಗಟ್ಟು ರ್ಯಾಲಿ: ಭಾರತದಲ್ಲಿನ ಅತ್ಯಾಚಾರಕ್ಕೆ ಖಂಡನೆ’ ಎಂಬ ಬ್ಯಾನರ್ನಡಿ ಯೂನಿಯನ್ ಸ್ಕ್ವೇರ್ನ ಮಹಾತ್ಮಗಾಂಧಿ ಪ್ರತಿಮೆ ಮುಂದೆ ನಡೆದ ರ್ಯಾಲಿಯಲ್ಲಿ ವಿವಿಧ ಸಂಘಸಂಸ್ಥೆಗಳು, ದೇವಾಲಯಗಳ ಮಂಡಳಿಗಳು ಪಾಲ್ಗೊಂಡಿದ್ದವು.