Advertisement

Covid-19;ಲಾಕ್ ಡೌನ್ ಹೊರತುಪಡಿಸಿ ಬೇರೆ ದಾರಿ ಇಲ್ಲ, ಲಕ್ಷ್ಮಣರೇಖೆ ದಾಟಬೇಡಿ: ಪ್ರಧಾನಿ ಮೋದಿ

09:13 AM Mar 30, 2020 | Nagendra Trasi |

ನವದೆಹಲಿ: ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಮೂಲಕ ಮಾತನಾಡಿ. ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ದಿಢೀರ್ ಲಾಕ್ ಡೌನ್ ಘೋಷಿಸಿದ್ದಕ್ಕೆ ಜನರಲ್ಲಿ
ಕ್ಷಮೆಯಾಚಿಸಿದ್ದಾರೆ.

Advertisement

ಬಡ ಜನರು ನನ್ನ ಮೇಲೆ ಆಕ್ರೋಶಗೊಂಡಿದ್ದಾರೆ ಎಂಬ ಅರಿವು ನನಗಿದೆ. ಆದರೆ ಕೋವಿಡ್ 19 ಮಹಾಮಾರಿ ಸೋಲಿಸಲು ಬೇರೆ ದಾರಿಯೇ ಇಲ್ಲವಾಗಿತ್ತು. ಅದಕ್ಕಾಗಿ ಲಾಕ್ ಡೌನ್ ಗೆ ಕರೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಭಾರತೀಯರು ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಅನ್ನು ಪಾಲಿಸಲೇಬೇಕು ಎಂದು ಪ್ರಧಾನಿ ಭಾನುವಾರ ಆಗ್ರಹಿಸಿದ್ದಾರೆ. ನಾನು ಭಾರತೀಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ಧೈರ್ಯದೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಇನ್ನೂ ಹಲವು ದಿನಗಳ ಕಾಲ ಈ ಲಕ್ಷ್ಮಣ ರೇಖೆಯನ್ನು ಮೀರಬೇಡಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next