Advertisement

ಕೊತಬಾಳದ ಬಸವ್ವಗೆ ಜನಪದ ಗೌರವ

04:11 PM Dec 10, 2018 | Team Udayavani |

ರೋಣ: ತಾಲೂಕಿನ ಕೊತಬಾಳ ಗ್ರಾಮದ ಬಸವ್ವ ತಾಯಿ ಹುಲಗವ್ವ ಮಾದರ ಅವರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರದಿಂದ ಕೊಡಮಾಡುವ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಕೋತಬಾಳ ಗ್ರಾಮದಲ್ಲಿ ಹುಲಿಗವ್ವ ಮಾದರ ಅವರ ಒಬ್ಬಳೆ ಮಗಳಾದ ಬಸಮ್ಮ ಚಿಕ್ಕ ವಯಸ್ಸಿನಿಂದಲೂ ಜಾನಪದ ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದಾರೆ. ಯಾವುದೇ ಓದು ಬರಹ ಗೊತ್ತಿಲ್ಲದಿದ್ದರೂ ಇವರ ಜಾನಪದ ಸಾಹಿತ್ಯದ ಜ್ಞಾನಕ್ಕೆ ಎಂತವರು ಸಹ ತಲೆಬಾಗುವಂತಹದಾಗಿದೆ. ತನ್ನ 12ನೇ ವಯಸ್ಸಿನಲ್ಲಿ ಜಾನಪದ ಸಾಹಿತ್ಯದ ಸೊಬಗನ್ನು ಮೈಗೊಡಿಸಿಕೊಂಡು ಬೆಳೆದ ಬಸಮ್ಮ ಅವರು ಜನಪದ ಸಾಹಿತ್ಯವನ್ನೆ ತಮ್ಮ ವೃತ್ತಿಯನ್ನಾಗಿ ಆಯ್ದುಕೊಂಡರು. ಜಿಲ್ಲೆ, ತಾಲೂಕಿನ ವಿವಿಧ ಗ್ರಾಮಗಳಾದ ಹುಲ್ಲೂರು, ಮುದೇನಗುಡಿ, ಕುರಹಟ್ಟಿ, ಮಾಡಲಗೇರಿ, ಹೊಳೆಆಲೂರು, ನವಲಗುಂದ,ನರಗುಂದ, ಬಾಗಲಕೋಟೆ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ಜನಪದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಪದ ಸಾಹಿತ್ಯದ ಸೊಬಗನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಬಸಮ್ಮ 50 ವರ್ಷಗಳಿಂದ ಮಾಡಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಜಾನಪದ ಕಲೆ ಮೈಗೂಡಿಸಿಕೊಂಡಿರುವ ಬಸಮ್ಮ ಅವರಿಗೆ ಈಗ 69 ವರ್ಷ. ಆದರೂ ತಾವು ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯಬೇಕು ಎಂಬ ನಿಟ್ಟಿನಲ್ಲಿ ಇಳಿ ವಯಸ್ಸಿನಲ್ಲಿ ತಮ್ಮ ಜಾನಪದ ಸಾಹಿತ್ಯದ ಮೇಲೆ ಇರುವ ಪ್ರೀತಿ ಅಭಿಮಾನವನ್ನು ಕಿಂಚಿತ್ತು ಕಡಿಮೆ ಮಾಡಿಲ್ಲ. ಸಿನಿಮಾ, ಟಿವಿ, ಸಾಮಾಜಿಕ ಜಾಲತಾಣ ಎಂಬಿತ್ಯಾದಿ ವಸ್ತುಗಳಿಗೆ ಅಂಟಿಕೊಂಡಿರುವ ಇಂದಿನ ಯುವ ಪೀಳಿಗೆಗೆ ಸಮ್ಮ ಸಂಸ್ಕೃತಿ ಸಂಪ್ರದಾಯ ತಿಳಿಸಬೇಕು ಎಂಬುದು ಬಸಮ್ಮ ಅವರ ಆಶಯವಾಗಿದೆ. ನಮ್ಮ ಸಂಸ್ಕೃತಿ ಕಲೆ ನಮ್ಮಿಂದಲೆ ಬೆಳೆಯಬೇಕು ವಿನಹ  ಮತ್ತೊಬ್ಬರಿಂದಲ್ಲ ಎಂಬುದು ಬಸಮ್ಮ ಅವರ ಆಶಯವಾಗಿದೆ.

ಡಿ. 26,27ರಂದು ಬೀದರ ಜಿಲ್ಲೆಯಲ್ಲಿ ನಡೆಯಲಿರುವ ಜನಪದ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರಿಗೆ ಹಾಗೂ ಇಬ್ಬರು ಜಾನಪದ ತಜ್ಞರಿಗೆ ಜಾನಪದ ಗೌರವ ಪ್ರಶಸ್ತಿ ನೀಡಲಾಗುತ್ತಿದೆ. ಅದರಲ್ಲಿ ಗದಗ ಜಿಲ್ಲೆಯಿಂದ ಬಸಮ್ಮ ಹುಲ್ಲಿಗೆವ್ವ ಮಾದರ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪುಸ್ಕೃತರಿಗೆ ಸರ್ಕಾರದಿಂದ 25 ಸಾವಿರ ರೂ. ನಗದು ಸೇರಿದಂತೆ ಇತರೆ ಗೌರವ ನೀಡಿ ಸನ್ಮಾನಿಸಲಾಗುತ್ತಿದೆ. ಕೋತಬಾಳ ಗ್ರಾಮದಲ್ಲಿ ಸಾಕಷ್ಟು ಜನ ಕಲಾವಿದರು ಕಂಡು ಬರುತ್ತಾರೆ. ಆದರೆ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕೋಟಿ ಕೋಟಿ ಹಣ ಖರ್ಚು ಮಾಡುತ್ತದೆ. ಆದರೆ ಇಂತಹ ಕಲಾವಿದರ ಜೀವನ ಹಾಗೂ ಅವರ ವಸತಿ ಬಗ್ಗೆ ಕಾಳಜಿ ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಕೊತಬಾಳ ಗ್ರಾಮದ ಬಸವರಾಜ ದಿಂಡೂರ ಕಲಾವಿದರ ಜೀವನದ ನೋವಿನ ಕುರಿತು ಅಳಲು ತೋಡಿಕೊಂಡಿದ್ದಾರೆ.

ನನಗೆ ಬುದ್ದಿ ಬಂದಾಗಿನಿಂದ ನಮ್ಮ ಸುತ್ತ ಮುತ್ತಲಿನ ಹೆಣ್ಣು ಮಕ್ಕಳು ಹಾಡುವ ಹಾಡು ಕೇಳಿ ತಿಳಿದು ಹಾಡಲಾರಂಭಿಸಿ ಅನೇಕ ಊರುಗಳನ್ನು ಸುತ್ತಿದ್ದೇನೆ. ನನ್ನ ತಾಯಿಗೆ ನಾನು ಒಬ್ಬಳೆ ಮಗಳು. ನನಗೆ ಮಕ್ಕಳಿಲ್ಲ. ಸರ್ಕಾರ ನನ್ನ ಮುಪ್ಪಿನಲ್ಲಿ ಗುರುತಿಸಿ ಪ್ರಶಸ್ತಿ ನೀಡದಕ್ಕೆ ತುಂಬಾ ಸಂತೋಷವಾಗಿದೆ.
.ಬಸವ್ವ ಮಾದರ, ಜಾನಪದ ಕಲಾವಿದೆ 

Advertisement

„ಯಚ್ಚರಗೌಡ ಗೋವಿಂದಗೌಡ್ರ 

Advertisement

Udayavani is now on Telegram. Click here to join our channel and stay updated with the latest news.

Next