Advertisement

ನಿವೃತ್ತ  ಯೋಧರಿಗೆ ಪುಷ್ಪಾರ್ಚನೆ-ಅದ್ದೂರಿ ಸ್ವಾಗತ

12:34 PM Apr 03, 2022 | Team Udayavani |

ದಾವಣಗೆರೆ: ಭಾರತೀಯ ಸೇನೆಯಲ್ಲಿ ಸುದೀರ್ಘ‌ ಸೇವೆ ಮಾಡಿ ನಿವೃತ್ತಿ ನಂತರ ಶುಕ್ರವಾರ ದಾವಣಗೆರೆಗೆ ಆಗಮಿಸಿದ ಯೋಧರಾದ ಪರಮೇಶ್‌ ಹಾಗೂ ಪುಟ್ಟಸ್ವಾಮಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದಾವಣಗೆರೆಯ ನಿಟುವಳ್ಳಿಯ ಯೋಧರಾದ ಪರಮೇಶ್‌ ಮತ್ತು ಪುಟ್ಟಸ್ವಾಮಿ ಸೇನೆಯಲ್ಲಿ ಸಾಕಷ್ಟು ಕಾಲ ಕೆಲಸ ನಿರ್ವಹಿಸಿದವರು. ರೈಲಿನಿಂದ ಇಳಿಯುತ್ತಿದ್ದಂತೆ ಇಬ್ಬರು ಯೋಧರಿಗೆ ಪುಷ್ಪಾರ್ಚನೆ ಮಾಡಲಾಯಿತು.

Advertisement

ಭಾರತ್‌ ಮಾತಾ ಕೀ ಜೈ… ಯೋಧರಾದ ಪರಮೇಶ್‌ ಮತ್ತು ಪುಟ್ಟಸ್ವಾಮಿ ಅವರಿಗೆ ಜಯ ಘೋಷಣೆ ಮೊಳಗಿಸಲಾಯಿತು. ಪರಮೇಶ್‌ ಹಾಗೂ ಪುಟ್ಟಸ್ವಾಮಿ ಅಹ್ಮದ್‌ ನಗರ, ಸೂರತ್‌, ಪಂಜಾಬ್‌, ಕಾಶ್ಮೀರದ ವಿವಿದ ಭಾಗದಲ್ಲಿ 17 ವರ್ಷ ಸೇವೆ ಸಲ್ಲಿಸಿರುವುದನ್ನ ಸ್ಮರಿಸಲಾಯಿತು. ಇಬ್ಬರು ಯೋಧರನ್ನು ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮಾತನಾಡಿದ ಯೋಧ ಪರಮೇಶ್‌, ದಾವಣಗೆರೆ ಜನರು ನೀಡಿರುವಂತಹ ಅದ್ಧೂರಿ ಸ್ವಾಗತ ನೋಡಿ ಅತ್ಯಂತ ಸಂತಸವಾಗುತ್ತಿದೆ. ಪ್ರತಿಯೊಬ್ಬರು ಸೇನೆಗೆ ಹೋಗಿ ದೇಶ ಭದ್ರತೆ ಮಾಡಬೇಕು. ದೇಶ ಇದ್ದರೆ ನಾವು, ಇಲ್ಲವಾದ್ರೆ ಉಕ್ರೇನ್‌ ಪರಿಸ್ಥಿತಿ ಉಂಟಾಗುತ್ತದೆ.ಐದಾರು ವರ್ಷಗಳಿಂದ ಭಾರತ ಸೇನೆ ಎಂದರೆ ಬೇರೆ ದೇಶಗಳಿಗೂ ಭಯ ಇದೆ.ಆದ್ದರಿಂದ ಪ್ರತಿಯೊಬ್ಬ ಯುವಕರೂ ಕೂಡ ಸೇನೆ ಸೇರಿ ದೇಶ ಸೇವೆ ಮಾಡುವಂತೆ ಮನವಿ ಮಾಡಿದರು.

ಮೇಯರ್‌ ಆರ್‌. ಜಯಮ್ಮ ಗೋಪಿನಾಯ್ಕ, ಉಪ ಮೇಯರ್‌ ಗಾಯತ್ರಿಬಾಯಿ ಖಂಡೋಜಿರಾವ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್‌, ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌, ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್‌, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆ ಶಿವಕುಮಾರ್‌, ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಯುವ ಮುಖಂಡ ಎನ್‌. ರಾಜಶೇಖರ್‌, ಪಿ.ಸಿ. ಶ್ರೀನಿವಾಸ್‌, ರವಿಬಾಬು, ಯೋಧರ ಕುಟುಂಬ ಸದಸ್ಯರು, ಬಂಧುಗಳು, ಆಪ್ತರು, ಅಭಿಮಾನಿಗಳು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next