Advertisement

‘ಜಪ್ಪು-ಬಪ್ಪಾಲ್‌ನ ಒಳಚರಂಡಿ ಅವ್ಯವಸ್ಥೆ ಸರಿಪಡಿಸಿ’

11:06 AM Nov 10, 2017 | Team Udayavani |

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪು-ಬಪ್ಪಾಲ್‌ ವಾರ್ಡಿನಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಆ ಭಾಗದ ಜನರು ರೋಗ ಭೀತಿಯಿಂದಲೇ ಬದುಕುತ್ತಿದ್ದಾರೆ. ಅವರ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್‌ ಆಗ್ರಹಿಸಿದ್ದಾರೆ.

Advertisement

ವಾರ್ಡಿಗೆ ಭೇಟಿಕೊಟ್ಟು ಅಲ್ಲಿನ ನಾಗರಿಕರೊಂದಿಗೆ ಮಾತನಾಡಿದ ಅವರು, ಶಾಸಕರು ಮತ್ತು ಕಾರ್ಪೊರೇಟರ್‌ ಜನರಿಗೆ ಅಗತ್ಯವಿರುವಲ್ಲಿ ಕಾಮಗಾರಿ ಮಾಡಬೇಕೇ ಹೊರತು ತಮಗೆ ಬೇಕಾದ ಕಡೆ ಮಾಡುವುದಲ್ಲ. ತನಗೆ ವೋಟ್‌ ಕೊಟ್ಟವರಿಗೆ ಮಾತ್ರ ಕೆಲಸ ಮಾಡಿ ಕೊಡುತ್ತೇನೆ ಎಂದು ಅಪ್ಪಿ ಅವರು ಹೇಳಿದ್ದು ಖಂಡನೀಯ. ಹಾಗಾದರೆ ಉಳಿದವರು ನಾವು ತೆರಿಗೆ ಕಟ್ಟೋದಿಲ್ಲ, ನಿಮಗೆ ವೋಟ್‌ ಕೊಟ್ಟವರಿಂದ ಮಾತ್ರ ತೆರಿಗೆ ಕಟ್ಟಿಸಿಕೊಳ್ಳಿ ಎಂದು ಹೇಳಿದರೆ ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಸಮಸ್ಯೆ ಪರಿಹಾರಕ್ಕಾಗಿ ಪಾಲಿಕೆಯ ಕಮಿಷನರ್‌ಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ಸ್ಥಳೀಯ ಮುಂದಾಳು ಭರತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next