Advertisement

ನೆಲಮಂಗಲದ ಸಿದ್ಧರ ಬೆಟ್ಟದಲ್ಲಿ ಒಂದೇ ಕುಟುಂಬದ ಐವರು ನೀರುಪಾಲು

08:58 AM Apr 28, 2019 | Vishnu Das |

ನೆಲಮಂಗಲ: ಇಲ್ಲಿನ ಸಿದ್ದರಬೆಟ್ಟದಲ್ಲಿರುವ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ದಾರುಣವಾಗಿ ನೀರುಪಾಲಾಗಿರುವ ದಾರುಣ ಘಟನೆ ಶನಿವಾರ ನಡೆದಿದೆ.

Advertisement

ವರದಿಯಾದಂತೆ ಮೃತರು ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ರೇಷ್ಮಾ (22)ಮುನೀರ್‌ ಖಾನ್‌(49), ಯಾರಬ್‌ ಖಾನ್‌(21), ಮುಬೀನ್‌ ತಾಜ್‌(21)ಮತ್ತು ಸಲ್ಮಾನ್‌ ಮೃತದುರ್‌ದೈವಿಗಳು.

ಪಿಕ್‌ನಿಕ್‌ಗೆ ತೆರಳಿದ್ದ ವೇಳೆ ಮುನೀರ್‌ ಅವರು ನೀರಿಗಿಳಿದಿದ್ದು ಆಯತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ರಕ್ಷಣೆಗೆ ತೆರಳಿ ಐವರು ನೀರು ಪಾಲಾಗಿದ್ದಾರೆ ಎಂದು ಪ್ರಾಥಮಿಕ ವರದಿ ಗಳಿಂದ ತಿಳಿದು ಬಂದಿದೆ.

ಡಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ಶವಗಳನ್ನ ಮೇಲಕ್ಕೆತ್ತಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next