Advertisement

ತೆರೆಮೇಲೆ ಐವರು ನಿರ್ದೇಶಕರ ಕನಸು: ಇಂದು ಐದು ಚಿತ್ರಗಳು ರಿಲೀಸ್‌

09:53 AM Feb 12, 2021 | Team Udayavani |

ಈಗಾಗಲೇ ಬಿಡುಗಡೆಗೆ ತಯಾರಾಗಿ ನಿಂತಿರುವ ಕನ್ನಡದ ಬಹುತೇಕ ಸ್ಟಾರ್‌ ನಟರ ಸಿನಿಮಾಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿವೆ. ಫೆಬ್ರವರಿ ಮೊದಲ ವಾರದಿಂದ ಮೇ ಎರಡನೇ ವಾರದವರೆಗೆ ಒಂದರ ಹಿಂದೊಂದು ಬಿಗ್‌ ಬಜೆಟ್‌, ಬಿಗ್‌ ಸ್ಟಾರ್ಸಿ ನಿಮಾಗಳು ತೆರೆಗೆ ಬರುತ್ತಿವೆ. ಎರಡು ವಾರಗಳ ಅಂತರದಲ್ಲಿ ಸ್ಟಾರ್ ಸಿನಿಮಾಗಳು ತೆರೆಗೆ ಬರುತ್ತಿರುವುದರಿಂದ, ಇನ್ನೂ ಮೂರ್‍ನಾಲ್ಕು ತಿಂಗಳು ಬಹುತೇಕ ಥಿಯೇಟರ್‌ಗಳು ಸ್ಟಾರ್ ಸಿನಿಮಾಗಳಿಂದಲೇ ರಾರಾಜಿಸಲಿವೆ. ಹೀಗಿರುವಾಗ ಸ್ಟಾರ್ ಸಿನಿಮಾಗಳ ಬಿಡುಗಡೆಯ ಎರಡು ವಾರಗಳ ನಡುವಿನ ಅವಧಿಯಲ್ಲಿ ಸದ್ಯ ಬಿಡುಗಡೆಗೆ ರೆಡಿಯಾಗಿರುವ ಹೊಸಬರ ಸಿನಿಮಾಗಳು ತೆರೆಗೆ ಬರಲು ತಯಾರಿ ಮಾಡಿಕೊಳ್ಳುತ್ತಿವೆ.

Advertisement

ಕಳೆದ ವಾರ (ಫೆ. 5) ರಂದು ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ’ ಮತ್ತು ವಿನೋದ್‌ ಪ್ರಭಾಕರ್‌ ಅಭಿನಯದ “ಶ್ಯಾಡೊ’ ಸಿನಿಮಾಗಳು ಬಿಡುಗಡೆಯಾಗಿದ್ದವು. ನಡುವೆಯೇ ಇನ್ನೂ ಎರಡು ಹೊಸಬರ ಸಿನಿಮಾಗಳು ಬಿಡುಗಡೆಯಾಗಿದ್ದವು. ಇನ್ನು ಮುಂದಿನ ಶುಕ್ರವಾರ (ಫೆ. 19) “ಪೊಗರು’ ಚಿತ್ರ ತೆರೆ ಕಾಣುತ್ತಿರುವುದರಿಂದ, ಈ ಶುಕ್ರವಾರ (ಫೆ. 12) ಯಾವುದೇ ಸ್ಟಾರ್ ಸಿನಿಮಾಗಳು ರಿಲೀಸ್‌ ಆಗುತ್ತಿಲ್ಲ. ಹೀಗಾಗಿ ಈ ವಾರ ಸ್ಟಾರ್ ಸಿನಿಮಾಗಳ ಅಬ್ಬರ ಇಲ್ಲದಿರುವುದರಿಂದ, ಬರೋಬ್ಬರಿ ಐದು ಹೊಸಬರ ಸಿನಿಮಾಗಳು ತಮ್ಮ ಬಿಡುಗಡೆಗೆ ಪ್ಲಾನ್‌ ಮಾಡಿಕೊಂಡಿವೆ.

ಕಲಾವಿದ

“ಪದ್ಮರಾಜ್‌ ಫಿಲಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಕಲಾವಿದ’ ಚಿತ್ರವನ್ನು ಶಿವಾನಂದ್‌ ಹೆಚ್.ಡಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರದೀಪ್‌ ಕುಮಾರ್‌, ಸಂಭ್ರಮ, ಮಂಜುನಾಥ್‌ ಹೆಗ್ಡೆ, ಅರುಣಾ ಬಾಲರಾಜ್‌, ಮೂ ಗು ಸುರೇಶ್‌, ವರ್ಷ ಮಲ್ಲೇಶ್‌, ಗೀತಾ, ಶ್ರೀಧರ್‌, ಜಗದೀಶ್‌, ಲೋಕೇಶ್‌ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚಿದಾನಂದ್‌ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿವೇಕ್‌ ಚಕ್ರವರ್ತಿ – ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.

ಇದನ್ನೂ ಓದಿ:ಉದಯವಾಣಿಯಲ್ಲಿ ಕಿಚ್ಚನ ಬೆಳ್ಳಿ ಹಬ್ಬದ ಸಂಭ್ರಮ: 25 ವರ್ಷದ ಸಿನಿಪಯಣಕ್ಕೆ ಆತ್ಮೀಯ ಅಭಿನಂದನೆ

Advertisement

ಕನಸು ಮಾರಾಟಕ್ಕಿದೆ.

ಶಿವಕುಮಾರ್‌ ನಿರ್ಮಾಣದಲ್ಲಿ ಮೂಡಿಬಂದಿರುವ “ಕನಸು ಮಾರಾಟಕ್ಕಿದೆ’ ಚಿತ್ರವನ್ನು ಸ್ಮಿತೇಶ್‌ ನಿರ್ದೇಶಿಸಿದ್ದಾರೆ. ಶ್ರೀಧರ್‌, ಗೋವಿಂದೇ ಗೌಡ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ರಾ

ರಾಜೇಶ್‌ ಗೌಡ ನಟಿಸಿ, ನಿರ್ದೇಶನ ಮಾಡಿರುವ ಕ್ರೈಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ರಾ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. “ರಾ’ ಚಿತ್ರದಲ್ಲಿ ನಾಯಕ ರಾಜೇಶ್‌ ಗೌಡ ಅವರೊಂದಿಗೆ, ಸನಾ ನಾಯಕ್‌, ಸುಜಿತ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕುಮಾರ್‌ ಛಾಯಾಗ್ರಹಣ, ಜೇಮ್ಸ್ ಆರ್ಕಿಟೆಕ್ಟ್ ಸಂಗೀತ, ತ್ರಿಭುವನ್‌ ನೃತ್ಯ ನಿರ್ದೇಶನವಿದೆ.

ನಿಮ್ಮೂರು

“ಹಠವಾದಿ ಸಿನಿ ಕ್ರಿಯೇಶನ್ಸ್‌’ ಲಾಂಛನದಲ್ಲಿ ನಿರ್ಮಾಣವಾಗಿರುವ “ನಿಮ್ಮೂರು’ ಚಿತ್ರಕ್ಕೆ ವಿಜಯ್‌ ಎಸ್‌. ನಿರ್ದೇಶನವಿದೆ. ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಲಕ್ಕಿರಾಮ್, ವೀಣಾ ಗಂಗಾರಾಮ್, ತ್ರಿವಿಕ್ರಂ, ಸಿದ್ದು ಮಂಡ್ಯ, ಮಂಜುನಾಥ್‌, ಅಂಜಿನಪ್ಪ, ಸುಧಾ, ಶ್ರೀಕಾಂತ್‌ ಹೊನ್ನವಳ್ಳಿ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪಳನಿವೇಲು ಛಾಯಾಗ್ರಹಣ, ಸಿ.ಕೆ. ಕುಮಾರ್‌ ಸಂಕಲನ, ಅಭಿನಂದನ್‌ ಕಶ್ಯಪ್‌ ಸಂಗೀತವಿದೆ.

ಅಣ್‌ತಮ್ಮ

ರವಿಚಂದ್ರ ಕೆ. ನಿರ್ಮಾಣ ಮಾಡಿರುವ “ಅಣ್‌ತಮ್ಮ’ ಚಿತ್ರಕ್ಕೆ ಕೆ. ಅನುº ಅರಸ್‌ ನಿರ್ದೇಶನ ಮಾಡಿದ್ದಾರೆ. ಗ್ರಾಮೀಣ ಸೊಗಡಿನ ಕತಾಹಂದರ ಹೊಂದಿರುವ ಈ ಚಿತ್ರದಲ್ಲಿ ನವನಟ ರಾಕೇಶ್‌ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚಿರಂಜೀವಿ ಛಾಯಾಗ್ರಹಣ, ಮರಿಸ್ವಾಮಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಪ್ರಸನ್ನ ಸಂಗೀತವಿದೆ.

ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next