Advertisement

ವಿರಾಪುರ ಗಡ್ಡೆ: ನೀರು ಪಾಲಾಗಿದ್ದ ಐವರು ಎನ್‌ ಡಿಆರ್‌ ಎಫ್‌ ಸಿಬ್ಬಂದಿ ರಕ್ಷಣೆ

10:18 AM Aug 13, 2019 | keerthan |

ಕೊಪ್ಪಳ: ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಿಲುಕಿದ್ದ ವಿದೇಶಿಗರು, ಸ್ಥಳೀಯರನ್ನು ರಕ್ಷಣೆ ಮಾಡುತ್ತಿದ್ದ ಐವರು ಎನ್‌ ಡಿಆರ್‌ ಎಫ್ ರಕ್ಷಣಾ ಸಿಬ್ಬಂದಿ ನೀರುಪಾಲಾಗಿದ್ದರು. ನಂತರ ಇತರ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಐವರನ್ನು ರಕ್ಷಣೆ ಮಾಡಲಾಗಿದೆ.

Advertisement

ತುಂಗಾಭದ್ರಾ ಜಲಾಶಯದಿಂದ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ವಿದೇಶಿಗರು, ಸ್ಥಳಿಯರು ಸಿಲುಕಿದ್ದರು. ಇಂದು ಬೆಳಗ್ಗಿನಿಂದ ಎನ್ ಡಿಆರ್ ಎಫ್ ತಂಡ ವಿದೇಶಿಗರು ಸೇರಿದಂತೆ 126 ಭಾರತೀಯ ನಿವಾಸಿಗಳನ್ನು ರಕ್ಷಣೆ ಮಾಡಿತ್ತು.

ಐವರೂ ಸುರಕ್ಷಾ ಕವಚ ಹೊಂದಿದ್ದು, ಇಬ್ಬರು ಗಿಡದ ಟೊಂಗೆ ಹಿಡಿದು ನಿಂತಿದ್ದಾರೆ‌ . ಮೂವರು ಅರ್ಧ ಕಿಲೋ ಮೀಟರ್ ತೇಲಿ ಹೋಗಿದ್ದಾರೆ ಎಂದು ವರದಿಯಾಗಿದೆ.

ರಕ್ಷಣಾ ಸಿಬ್ಬಂದಿ ನೀರುಪಾಲಾದ ಹಿನ್ನಲೆಯಲ್ಲಿ ನಡುಗಡ್ಡೆಯಲ್ಲಿ ಸಿಲುಕಿದ್ದ ಜನರ ರಕ್ಷಣಾ ಕಾರ್ಯ ಸ್ಥಗಿತವಾಗಿದೆ. ಜಿಲ್ಲಾಧಿಕಾರಿ ಸುನೀಲ್ ಕುಮಾರ ಹಾಗೂ ಎಸಿ ಸಿ.ಡಿ ಗೀತಾ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next