Advertisement

ಉಪ್ಪಳ ಭೀಕರ ರಸ್ತೆ ಅಪಘಾತ ಐವರು ದುರ್ಮರಣ

08:44 AM Jul 09, 2018 | Harsha Rao |

ಕಾಸರಗೋಡು : ಲಾರಿ ಹಾಗೂ ಜೀಪಿನ ನಡುವೆ ಸಂಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ಘಟನೆ ಕಾಸರಗೋಡಿನ ಉಪ್ಪಳ ಸಮೀಪ ನಯಾ ಬಜಾರ್ ಬಳಿ ಸಂಭವಿಸಿದೆ.

Advertisement

ಮೃತರು ದಕ್ಷಿಣಕನ್ನಡ ಜಿಲ್ಲೆಯ ಕೆ.ಸಿ.ರೋಡ್ ನಿವಾಸಿಗಳಾದ ಅಸ್ಮಾ(30), ಬಿಫಾತಿಮ(65), ನಸೀಮಾ(38), ಮುಸ್ತಾಕ್ (41) ಹಾಗೂ ಇಮ್ತಿಯಾಜ್ (35) ಎಂದು ತಿಳಿದುಬಂದಿದೆ.       

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪಿನಲ್ಲಿ ಮಕ್ಕಳು ಸೇರಿ ಸುಮಾರು 18 ಮಂದಿ ಪ್ರಯಾಣಿಸುತ್ತಿದ್ದರು, ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Advertisement

Udayavani is now on Telegram. Click here to join our channel and stay updated with the latest news.

Next