Advertisement

ಮೊದಲ ಪತ್ನಿಯಿಂದ ಪತಿ,ಸವತಿಯ ಮೇಲೆ ದಾಳಿ: ಆನೇಕಲ್‌ನಲ್ಲಿ ಮಾರಾಮಾರಿ 

01:29 PM Jan 25, 2019 | |

ಆನೇಕಲ್‌: ಮೊದಲ ಪತ್ನಿಯೊಬ್ಬಳು ಮಗಳ ಮದುವೆಗೆ ಪತಿ ಬರಲಿಲ್ಲವೆಂದು ಆತನ 2 ನೇ ಪತ್ನಿಯ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಬಳಿಕ ಮಾರಾಮಾರಿ ಶುಕ್ರವಾರ ಬನಹಳ್ಳಿಯಲ್ಲಿ ನಡೆದಿದೆ. 

Advertisement

ಕೃಷ್ಣಪ್ಪ ಎನ್ನುವಾತ ಮೊದಲ ಪತ್ನಿ ಚಂದ್ರಕಲಾರಿಂದ ದೂರವಿದ್ದು, ವಸಂತ ಕುಮಾರಿ ಎನ್ನುವವರನ್ನು ವಿವಾಹವಾಗಿ ಆಕೆಯೊಂದಿಗೆ ವಾಸವಾಗಿದ್ದ. 

ಚಂದ್ರಕಲಾ ಅವರ ಮಗಳ ಮದುವೆ ನಡೆದಿದ್ದು, ಈ ಸಮಾರಂಭಕ್ಕೆ ಕೃಷ್ಣಪ್ಪ ಬಾರದೆ 2 ನೇ ಪತ್ನಿಯ ಮನೆಯಲ್ಲಿ ಉಳಿದಿದ್ದ.ಇದರಿಂದ ರೊಚ್ಚಿಗೆದ್ದ ಮೊದಲ ಪತ್ನಿ ಮತ್ತು ಸಂಬಂಧಿಕರು 2 ನೇ ಪತ್ನಿಯ ಮನೆಯ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. 

ಬನಕಲ್‌ ಸೂರ್ಯಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next