Advertisement

Assam ಗೆ ಮೊದಲ ವಂದೇ ಭಾರತ್‌

11:35 PM May 29, 2023 | Team Udayavani |

ಗುವಾಹಾಟಿ: ಪಶ್ಚಿಮ ಬಂಗಾಲದ ನ್ಯೂ ಜಲಪಾಯ್‌ಗಾರಿಯಿಂದ ಅಸ್ಸಾಂನ ಗುವಾಹಾಟಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ. ಇದು ಈಶಾನ್ಯ ರಾಜ್ಯ ಅಸ್ಸಾಂಗೆ ಮೊದಲ ವಂದೇ ಭಾರತ್‌ ಎಕ್ಸ್‌ ಪ್ರಸ್‌ ಆಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಹೊಸ ರೈಲಿನಿಂದಾಗಿ ಅಸ್ಸಾಂನಲ್ಲಿ ಶಿಕ್ಷಣ, ಪ್ರವಾಸೋದ್ಯಮ, ವ್ಯಾಪಾರ, ವಾಣಿಜ್ಯ ಅವಕಾಶಗಳು ವೃದ್ಧಿಯಾಗಲಿವೆ ಎಂದು ಹೇಳಿದ್ದಾರೆ. ಕಾಝಿರಂಗ, ಮನಾಸ್‌ ನ್ಯಾಶನಲ್‌ ಪಾರ್ಕ್‌, ಕಾಮಾಖ್ಯಾ ದೇವಸ್ಥಾನಗಳಿಗೆ ಶೀಘ್ರವಾಗಿ ತೆರಳುವವರಿಗೆ ಇದರಿಂದ ಅನುಕೂಲವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next