Advertisement

ಮೊದಲು ರಸ್ತೆ ಸರಿಪಡಿಸಿ, ನಂತರ ದಂಡ ವಿಧಿಸಿ

11:56 AM Sep 08, 2019 | Lakshmi GovindaRaju |

ದೇಶದಲ್ಲಿ ಜಾರಿಯಾದ ಹೊಸ ಟ್ರಾಫಿಕ್‌ ದಂಡದ ಕುರಿತಾಗಿ ಸಾಕಷ್ಟು ಚರ್ಚೆಗಳು, ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ಅದರಲ್ಲೂ ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಗಳನ್ನು ಸರಿಪಡಿಸುವ ಜವಾಬ್ದಾರಿ ಕೂಡಾ ಸರ್ಕಾರಕ್ಕೆ ಇದೆ. ಆದರೆ, ಅದನ್ನು ಸರಿಪಡಿಸದೇ ವಾಹನ ಸವಾರರ ಮೇಲೆ ದುಬಾರಿ ದಂಡ ವಿಧಿಸುವುದು ಎಷ್ಟು ಸರಿ ಎಂಬ ಚರ್ಚೆ ನಡೆಯುತ್ತಿದೆ. ನಟಿ ಸೋನು ಗೌಡ ಕೂಡಾ ಈಗ ಮಾತಿಗೆ ಧ್ವನಿ ಕೂಡಿಸಿದ್ದಾರೆ. ಮೊದಲು ರಸ್ತೆ ಸರಿಪಡಿಸಿ, ಆ ನಂತರ ದಂಡ ವಿಧಿಸಿ ಎಂದಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಸೋನು ಗೌಡ, “ಮುಖ್ಯಮಂತ್ರಿಗಳೇ ದುಬಾರಿ ದಂಡ ವಿಧಿಸುವ ಮೊದಲು ರಸ್ತೆ ಗುಂಡಿಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಿ. ಜನ ಸಾಮಾನ್ಯರು ಕಷ್ಟಪಟ್ಟು ದುಡಿದ ಹಣವನ್ನು ಹೀಗೆ ಹಾಳು ಮಾಡಬೇಡಿ’ ಎಂದು ಟ್ವೀಟ್‌ ಮಾಡಿದ್ದಾರೆ. ಈ ಹಿಂದೆಯೂ ಸೋನು ಗೌಡ, ಹೊಂಡ-ಗುಂಡಿಯಿಂದ ತುಂಬಿರುವ ರಸ್ತೆಯನ್ನು ಸರಿಪಡಿಸದ ಸರ್ಕಾರದ ವಿರುದ್ಧ ಮತ್ಸ್ಯ ಕನ್ಯೆ ಗೆಟಪ್‌ನಲ್ಲಿ ಪ್ರತಿಭಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next