Advertisement

ಬಾಗಲಕೋಟೆಯಲ್ಲಿ ಕೋವಿಡ್ 19 ವೈರಸ್ ಗೆ ಮೊದಲ ಬಲಿ ; ನಿನ್ನೆಯಷ್ಟೇ ಸೋಂಕು ದೃಢ ಇಂದು ಸಾವು

08:59 AM Apr 04, 2020 | Hari Prasad |

ಬಾಗಲಕೋಟೆ: ಇಲ್ಲಿನ ಕೋವಿಡ್  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಸೊಂಕಿತ ವೃದ್ದ ರಾತ್ರಿ ಸಾವನ್ನಪ್ಪಿದ್ದಾರೆ. 75 ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ತಿಳಿಸಿದ್ದಾರೆ.

Advertisement

ನಗರದಲ್ಲಿ ಕಿರಾಣಿ ಹಾಗೂ ಅಡುಗೆ ಎಣ್ಣೆ ವರ್ತಕರಾಗಿದ್ದ ಈ ವ್ಯಕ್ತಿ ಮಾರ್ಚ್ 31ರಂದು ಅನಾರೋಗ್ಯದ ಕಾರಣ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಯಾವುದೇ ವಿದೇಶ, ರಾಜ್ಯ, ಪರರಾಜ್ಯ, ಪರ ಜಿಲ್ಲೆಗೂ ಪ್ರವಾಸ ಮಾಡಿರಲಿಲ್ಲ, ಆದರೂ, ಇವರಿಗೆ ಕೋವಿಡ್ ಸೋಂಕು ತಗುಲಿರುವುದು ಗುರುವಾರ ರಾತ್ರಿಯಷ್ಟೇ ದೃಢಪಟ್ಟಿತ್ತು. ಮೃತ ವೃದ್ಧ ವ್ಯಾಪಾರಿಯ ಮಗ, ಮಗಳು ಹತ್ತು ದಿನದ ಹಿಂದೆ ಬೆಂಗಳೂರಿನಿಂದ ಊರಿಗೆ ಬಂದಿದ್ದರು.

ಮಗ, ಮಗಳು ಕುಟುಂಬದ ಇನ್ನೊಬ್ಬರ ವರದಿ ನೆಗೆಟಿವ್ ಎಂದು ಕೆಲವೇ ಗಂಟೆಗಳ ಹಿಂದೆ ಬಂದಿತ್ತು. ಇದೀಗ ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ಗೆ ಸಂಬಂಧಿಸಿ ಮೊದಲ ಸಾವು ಸಂಭವಿಸಿರುವುದು ಜಿಲ್ಲೆಯ ಜನರ ಆತಂಕವನ್ನು ಹೆಚ್ಚಿಸಿದೆ.

ಮೃತ ವೃದ್ಧ ವ್ಯಾಪಾರಿಯ ಅಂತ್ಯಕ್ರಿಯೆ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ನಿಯಮದಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್. ಡಾ.ರಾಜೇಂದ್ರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next