Advertisement

ಎಸ್ಕೇಪ್‌ ಆಗಲು ಯತ್ನಿಸಿದ ಕೊಲೆ ಆರೋಪಿ ಸರಗಳ್ಳನ ಮೇಲೆ ಫೈರಿಂಗ್‌

01:44 PM Jun 24, 2017 | Team Udayavani |

ಬೆಂಗಳೂರು: ಸರಗಳ್ಳತನದ ವೇಳೆ ಯುವಕನೊಬ್ಬನನ್ನು ಇರಿದು ಕೊಲೆಗೈದ ಆರೋಪದಲ್ಲಿ ಬಂಧನಕ್ಕೊಳಾಗಿದ್ದ ಆರೋಪಿಯೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. 

Advertisement

 ಎಚ್‌ಎಎಲ್‌ ಠಾಣಾ ವ್ಯಾಪ್ತಿಯ ಅನ್ನಸಂದ್ರ ಪಾಳ್ಯ ದಲ್ಲಿ ಘಟನೆ ನಡೆದಿದ್ದು,  ಜೂನ್‌ 10 ರಂದು ನಡೆದ  ಸಾಯಿಚರಣ್‌ ಕೊಲೆ ಆರೋಪಿಯಾಗಿದ್ದ ಜಾನ್ಸನ್‌ ಎಂಬಾತ ಪೊಲೀಸರ ಬಳಿ ಬಹಿರ್ದೆಸೆಗೆ ಹೋಗಬೇಕೆಂದು ಕೇಳಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಎಷ್ಟೇ ಹೇಳಿದರು ಕೇಳದ ಆತ ಕಲ್ಲುಗಳನ್ನು ಪೊಲೀಸರತ್ತ ತೂರಿದ್ದಾನೆ. ಸ್ವರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ 
ಸಾದಿಕ್‌ ಪಾಷಾ  ಅವರು ಒಂದು ಸುತ್ತು ಗುಂಡು ಹಾರಿಸಿದ್ದು ,ಗುಂಡು  ಕಾಲನ್ನು ಹೊಕ್ಕಿ ಜಾನ್ಸನ್‌ ಕುಸಿದು ಬಿದ್ದಿದ್ದಾನೆ. 

ಕೂಡಲೇ ಜಾನ್ಸನ್‌ನನ್ನು ಪೊಲೀಸರು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.  

ಸಾಯಿಚರಣ್‌ ಕೊಲೆಯಾದ ಸ್ಥಳ ಪಂಚನಾಮೆಗೆ ಕರೆದೊಯ್ಯುವಾಗ ಜಾನ್ಸನ್‌ ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next