Advertisement

ಇಂಡೋ-ಟಿಬೆಟಿಯನ್ ಯೋಧನ ಏಕಾಏಕಿ ಗುಂಡಿನ ದಾಳಿಗೆ ಆರು ಮಂದಿ ಯೋಧರ ಸಾವು

09:44 AM Dec 05, 2019 | Team Udayavani |

ರಾಯ್ ಪುರ್: ಯೋಧರ ನಡುವೆ ಮಾರಾಮಾರಿ ಘಟನೆಯಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ 5 ಮಂದಿ ಇಂಡೋ ಟಿಬೆಟಿಯನ್ ಗಡಿ ಕಾವಲು ಪಡೆ ಯೋಧರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಬುಧವಾರ ಚತ್ತೀಸ್ ಗಢದಲ್ಲಿ ನಡೆದಿದೆ.

Advertisement

ಐಟಿಬಿಪಿಯ ಕಾನ್ಸ್ ಟೇಬಲ್ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ 5 ಮಂದಿ ಯೋಧರು ಸಾವನ್ನಪ್ಪಿದ್ದು, ಬಳಿಕ ತನಗೆ ತಾನು ಗುಂಡು ಹೊಡೆದುಕೊಂಡ ಯೋಧ ಸಾವಿಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.

ನಾರಾಯಣ್ ಪುರ್ ಪ್ರದೇಶದಲ್ಲಿ ಶಿಬಿರದಲ್ಲಿ ಐಟಿಬಿಪಿ ಜವಾನರ ನಡುವೆ ಜಗಳ ಆರಂಭವಾಗಿತ್ತು. ನಂತರ ಯೋಧರನೊಬ್ಬ ತನ್ನ ಸಹ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿರುವುದಾಗಿ ಚತ್ತೀಸ್ ಗಢ್ ಪೊಲೀಸ್ ಮಹಾನಿರ್ದೇಶಕ ಡಿಎಂ ಅವಾಸ್ಥಿ ತಿಳಿಸಿದ್ದಾರೆ.

ಆದರೆ ಮತ್ತೊಂದು ವರದಿ ಪ್ರಕಾರ, ಗುಂಡಿನ ದಾಳಿಗೆ ಜಗಳವೇ ಕಾರಣ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ರಜೆಯ ವಿಚಾರದಲ್ಲಿ ಯೋಧ ಆಕ್ರೋಶಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next