Advertisement

Manipura; ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ; 13 ಮೃತದೇಹಗಳು ಅಸ್ಸಾಂ ರೈಫಲ್ಸ್ ವಶಕ್ಕೆ

05:46 PM Dec 04, 2023 | Team Udayavani |

ಇಂಫಾಲ್: ಸೋಮವಾರ ಮಣಿಪುರದ ತೆಂಗ್ನೌಪಾಲ್‌ನಲ್ಲಿ ಗುಂಡಿನ ದಾಳಿಯ ಘಟನೆ ವರದಿಯಾಗಿದೆ. ಅಸ್ಸಾಂ ರೈಫಲ್ಸ್ ನಡೆಸಿದ ಕಾರ್ಯಾಚರಣೆಯ ನಂತರ, ತೆಂಗ್ನೌಪಾಲ್ ಜಿಲ್ಲೆಯಲ್ಲಿ 13 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

Advertisement

ಮೃತರ ಗುರುತು ಇನ್ನೂ ತಿಳಿದುಬಂದಿಲ್ಲ ಎಂದು ವರದಿ ತಿಳಿಸಿದೆ.

ಡಿಸೆಂಬರ್ 3 ರಂದು, ತೆಂಗ್ನೌಪಾಲ್ ಜಿಲ್ಲೆಯ ಕುಕಿ-ಜೋ ಬುಡಕಟ್ಟು ಗುಂಪುಗಳು ಭಾರತ ಸರ್ಕಾರ ಮತ್ತು ಮೈಟೆಯ್ ಉಗ್ರಗಾಮಿ ಬಣ, ಯುಎನ್ಎಲ್ ಎಫ್ (ಪಾಂಬೆ) ನಡುವಿನ ಇತ್ತೀಚಿನ ‘ಶಾಂತಿ ಒಪ್ಪಂದ’ವನ್ನು ಸ್ವಾಗತಿಸಿದೆ.

ಮಣಿಪುರ ಸರ್ಕಾರವು ಭಾನುವಾರ ಡಿಸೆಂಬರ್ 18 ರವರೆಗೆ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಿದೆ.

“ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ ಮತ್ತು ಮೊಬೈಲ್ ಇಂಟರ್ನೆಟ್ ನಿಷೇಧದಿಂದ ಜನರು ಎದುರಿಸುತ್ತಿರುವ ಅನಾನುಕೂಲತೆಗಳನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಅಮಾನತುಗೊಳಿಸುವಿಕೆಯನ್ನು ಸಡಿಲಿಸಲು ನಿರ್ಧರಿಸಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Advertisement

ಚಂಡೇಲ್ ಮತ್ತು ಕಾಕ್ಚಿಂಗ್, ಚುರಚಂದ್‌ಪುರ ಮತ್ತು ಬಿಷ್ಣುಪುರ್, ಚುರಾಚಂದ್‌ಪುರ ಮತ್ತು ಕಾಕ್ಚಿಂಗ್, ಕಾಂಗ್‌ಪೊಕ್ಪಿ ಮತ್ತು ಇಂಫಾಲ್ ಪಶ್ಚಿಮ, ಕಾಂಗ್‌ಪೊಕ್ಪಿ ಮತ್ತು ಇಂಫಾಲ್ ಪೂರ್ವ, ಕಾಂಗ್‌ಪೊಕ್ಪಿ ಮತ್ತು ತೌಬಲ್ ಮತ್ತು ತೆಂಗ್‌ನೌಪಾಲ್ ಮತ್ತು ಕಾಕ್‌ಚಿಂಗ್‌ನಂತಹ ಜಿಲ್ಲೆಗಳ ನಡುವಿನ ಪಕ್ಕದ ಪ್ರದೇಶಗಳಲ್ಲಿ 2 ಕಿಮೀ ವ್ಯಾಪ್ತಿಯಲ್ಲಿ ಸೇವೆಗಳನ್ನು ಒದಗಿಸುವ ಮೊಬೈಲ್ ಟವರ್‌ ಗಳು ಇನ್ನೂ ಅಮಾನತುಗೊಂಡಿವೆ.

ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಮೇ 3 ರಿಂದ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next