Advertisement

ಆಯುಧ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ ಸೆಕ್ಯೂರಿಟಿ ; ವಿಡಿಯೋ ವೈರಲ್

06:43 PM Oct 14, 2021 | Team Udayavani |

ಚಿತ್ರದುರ್ಗ: ಜಿಲ್ಲೆಯ ಸಾಸಲು ಗ್ರಾಮದ ಭೂತಪ್ಪನ ದೇಗುಲದ ಬಳಿ ಆಯುಧಪೂಜೆ ನಡೆದ ಬಳಿಕ ಸೆಕ್ಯೂರಿಟಿ ಸಿಬ್ಬಂದಿಗಳಿಬ್ಬರು ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Advertisement

ಸೆಕ್ಯೂರಿಟಿ ಕಂಪನಿಗೆ ಸೇರಿದ ವಾಹನಗಳ ಪೂಜೆ ವೇಳೆ ಘಟನೆ ನಡೆದಿದ್ದು, ಎಟಿಎಂ ಗೆ ಹಣ ತುಂಬುವ ವಾಹನಗಳ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.

ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಳಿಯಲ್ಲಿ ಗುಂಡು ಹಾರಿಸುವುದು ಅಪರಾಧವಾಗಿದ್ದು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next