Advertisement

ಹಸುವಿನ ಮೇವಿನಲ್ಲಿ ಸಿಡಿಮದ್ದು ಇಟ್ಟ ದುರುಳರು: ಮೇವು ತಿಂದು ಸಾವನ್ನಪ್ಪಿದ್ದ ಹಸು

03:52 PM Jul 21, 2020 | keerthan |

ಮೈಸೂರು: ಕೇರಳದಲ್ಲಿ ಗರ್ಭಿಣಿ ಕಾಡಾನೆಯೊಂದು ಪಟಾಕಿ ತುಂಬಿದ ಪೈನಾಪಲ್ ಸೇವಿಸಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೆ ಸಿಡಿಮದ್ದು ಆಹಾರ ಸೇವಿಸಿದ ಹಸುವೊಂದು ಮೃತಪಟ್ಟಿರುವ ಘಟನೆ ಎಚ್. ಡಿ.ಕೋಟೆ ತಾಲೂಕಿನ ಬೆಡ್ಟದಬೀಡು ಗ್ರಾಮದಲ್ಲಿ ನಡೆದಿದೆ.

Advertisement

ಕಿಡಿಗೇಡಿಗಳು ಮೇವಿನಲ್ಲಿಟ್ಟಿದ್ದ ಸಿಡಿಮದ್ದು ಸೇವಿಸಿದ ಹಸುವೊಂದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದೆ.

ಮೈಸೂರು ಹೆಚ್.ಡಿ.ಕೋಟೆ ತಾಲೂಕಿನ ಬೆಟ್ಟದ ಬೀಡು ಗ್ರಾಮದ ನರಸಿಂಹೇಗೌಡ ಎಂಬುವವರಿಗೆ ಸೇರಿದ ಹಸು ಯಾರೋ ಇಟ್ಟಿದ್ದ ಆಹಾರ ಸೇವಿಸಿದೆ. ಆದರೆ ಆ ಆಹಾರದಲ್ಲಿ ಕಿಡಿಗೇಡಿಗಳು ಸಿಡಿಮದ್ದು ತುಂಬಿಟ್ಟಿದ್ದರು. ಹಸು ಆಹಾರ ಸೇವಿಸುತ್ತಿದ್ದಂತೆ ಅದು ಬಾಯಿಯಲ್ಲಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಹಸುವಿನ ಬಾಯಿ ಸಂಪೂರ್ಣ ಛಿದ್ರ ವಾಗಿದ್ದು ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ದಾರುಣವಾಗಿ ಮೃತಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next