Advertisement

ಪಟಾಕಿ ಅನಾಹುತ: ದೇಶಾದ್ಯಂತ 14 ಬಲಿ

09:39 AM Oct 29, 2019 | Team Udayavani |

ನವದೆಹಲಿ: ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಅನಾಹುತಗಳು ಸಂಭವಿಸಿ ದೇಶಾದ್ಯಂತ 9 ಮಂದಿ ಬಲಿಯಾಗಿದ್ದಾರೆ.

Advertisement

ನೂರಾರು ಮಂದಿ ಕಣ್ಣಿಗೆ ಹಾನಿ, ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಹಚ್ಚುವಾಗ, ಮನೆಗಳು, ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟಾರೆ 7 ಮಂದಿ ಮೃತಪಟ್ಟಿದ್ದಾರೆ. ಆದರೆ, ದೆಹಲಿಯಲ್ಲಿ 2017ರಲ್ಲಿ ಸುಡುಮದ್ದುಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹಾನಿಯ ಪ್ರಮಾಣ ಈ ಬಾರಿ ಕಡಿಮೆಯಾಗಿದೆ.

ಇನ್ನು ಒಡಿಶಾದಲ್ಲಿ ಪಟಾಕಿ ಸಂಬಂಧಿ ಘಟನೆಗಳಿಗೆ 5 ಮಂದಿ ಬಲಿಯಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ 2 ವರ್ಷದ ಬಾಲಕ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಸುಟ್ಟಗಾಯಗಳು, ಕಣ್ಣಿಗೆ ಹಾನಿಯಾಗಿ 498 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನಲ್ಲಿ 31 ರೋಗಿಗಳು, ಹೈದರಾಬಾದ್‌ನಲ್ಲಿ 77 ಮಂದಿಗೆ ಚಿಕಿತ್ಸೆ ನೀಡಲಾಗಿದೆ.

ದೆಹಲಿಯೊಂದರಲ್ಲೇ 200 ಅಗ್ನಿ ಅನಾಹುತದ ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next