Advertisement

ಅಂಗಡಿಗೆ ಬೆಂಕಿ: ಅಪರಾಧ ಸಾಬೀತು

11:06 AM Dec 06, 2018 | Harsha Rao |

ಕುಂದಾಪುರ: ಮೂರು ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ಕೋಮುದ್ವೇಷದಿಂದ ಅಂಗಡಿಗೆ  ಬೆಂಕಿ ಹಾಕಿದ್ದ ಪ್ರಕರಣದ ಆರೋಪ ಸಾಬೀತಾಗಿದ್ದು, ತಪ್ಪಿತಸ್ಥರಿಗೆ ಡಿ.10ರಂದು ಶಿಕ್ಷೆ ಪ್ರಕಟಿಸುವುದಾಗಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. 

Advertisement

ಗಂಗೊಳ್ಳಿ ಬಾದ್‌ಶಾ ಮೊಹಲ್ಲಾದ ಮಹ್ಮದ್‌ ಜುನೈದ್‌ ಹಾಗೂ ವೆಲ್ಡಿಂಗ್‌ ಜಾಫ‌ರ್‌ ಯಾನೆ ಜಾಫ‌ರ್‌  ಅವರು 2015ರ ಜ. 21ರಂದು ನುಸುಕಿನ ಜಾವ 2.20ಕ್ಕೆ ಗಂಗೊಳ್ಳಿ ಮುಖ್ಯರಸ್ತೆಯ ವೆಂಕಟೇಶ ಭಾಸ್ಕರ ಶೆಣೈ ಅವರ   ಅಂಗಡಿಯ ಗೋದಾಮು, ಕಾರು ಹಾಗೂ ಬೈಕಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಾಕಿದ್ದರು. ಪ್ರಕರಣದಲ್ಲಿ ಒಟ್ಟು 28 ಸಾಕ್ಷಿಗಳಿದ್ದು, ಈ ಪೈಕಿ 14 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್‌ ಖಂಡೇರಿ ಅವರು ಅಪರಾಧ ಸಾಬೀತಾಗಿದೆ ಎಂದು ಪ್ರಕಟಿಸಿದ್ದಾರೆ. ಸರಕಾರದ ಪರ ಜಿಲ್ಲಾ ಸಹಾಯಕ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next