Advertisement

ಆಸ್ತಿ ವೈಷಮ್ಯ: ಅಮ್ಮತ್ತಿಯಲ್ಲಿ 2 ವಾಹನಗಳಿಗೆ ಬೆಂಕಿ 

09:33 AM Dec 08, 2017 | Team Udayavani |

ಮಡಿಕೇರಿ: ಆಸ್ತಿ ವೈಷಮ್ಯದಿಂದ ಸಹೋದರರ ನಡುವೆ ಕಲಹ ಏರ್ಪಟ್ಟು ಎರಡು ವಾಹನಗಳು ಬೆಂಕಿಗೆ ಆಹುತಿಯಾದ ಘಟನೆ ಅಮ್ಮತ್ತಿಯಲ್ಲಿ ನಡೆದಿದೆ.  ಚಿಟ್ಟಿಯಪ್ಪ ಎಂಬಾತ ತನ್ನ ಸಹೋದರ‌ ವಿಶ್ವನಾಥ್‌ ಎಂಬುವವರಿಗೆ ಸೇರಿದ ಜೀಪು ಹಾಗೂ ಅವರ ಸಂಬಂಧಿಕರಾದ ರಮೇಶ್‌ ಎಂಬುವರ ಮಾರುತಿ ಓಮ್ನಿ ಕಾರಿಗೆ ಪೆಟ್ರೋಲ್‌ ಸುರಿದು ಬೆಂಕಿ ಕೊಟ್ಟ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. 

Advertisement

 ಅಮ್ಮತ್ತಿಯ ವಿಶ್ವನಾಥ್‌ ಹಾಗೂ ಸಹೋದರ ಚಿಟ್ಟಿಯಪ್ಪ ಅವರ ನಡುವೆ   ಕಾಫಿ ತೋಟದ ವಿಚಾರದಲ್ಲಿ ವಿವಾದವಿತ್ತು ಎಂದು ಹೇಳಲಾಗಿದೆ. ಕಾಫಿ ಕೊಯ್ಲು ವೇಳೆ  ಚಿಟ್ಟಿಯಪ್ಪ ಹಾಗೂ ವಿಶ್ವನಾಥ್‌ ನಡುವೆ ಕಲಹ ಏರ್ಪಟ್ಟಿದೆ. ರೋಷಗೊಂಡ ಚಿಟ್ಟಿಯಪ್ಪ, ಎರಡು ವಾಹನಗಳಿಗೆ  ಬೆಂಕಿ ಹಚ್ಚಿ  ಕಾರಿನಲ್ಲಿ ಪರಾರಿಯಾಗಿದ್ದಾನೆ. ಗೋಣಿಕೊಪ್ಪದಿಂದ ಅಗ್ನಿ ಶಾಮಕ ದಳ ಬರುವಷ್ಟರಲ್ಲಿ ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಪ್ರಕರಣ ಬಗ್ಗೆ ವಿರಾಜಪೇಟೆ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next