Advertisement

ಬೆಂಕಿ ಅವಘಡ: 5 ಲಕ್ಷಕ್ಕೂ ಹೆಚ್ಚು ನಷ್ಟ

05:11 PM Feb 18, 2021 | Team Udayavani |

ಶಿರಾ: ತಾಲೂಕಿನ ಚನ್ನನಕುಂಟೆ ಗೋವಿಂದ ರಾಜು ಬಿನ್‌ ಲೇಟ್‌ ತಿಮ್ಮಣ್ಣನವರ ಹೊಲಕ್ಕೆ ಬುಧವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅವಘಡದಲ್ಲಿ ದಾಳಿಂಬೆ, ತೆಂಗು, 2 ಟಿಲ್ಲರ್‌, ಡ್ರಿಪ್‌ ಪೈಪ್‌ಗ್ಳು, ಡ್ರಮ್‌ಗಳಿಗೆ ಹಾನಿಯುಂಟಾಗಿ ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಗೋವಿಂದ

Advertisement

ರಾಜು ಅವರ ಹೊಲದ ಪಕ್ಕದ ಹೊಲದಲ್ಲಿ ಹಾಕಿರುವ ಬೆಂಕಿ ಬಿಸಿಲ ಧಗೆಯಿಂದ ಇವರ ಹೊಲಕ್ಕೆ ಆವರಿಸಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕೂಡಲೇ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ  ನಂದಿಸಿದ್ದು ಭಾರೀ ಅನಾಹುತ ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next