Advertisement

ಕುರುಚಲು ಕಾಡಿಗೆ ಬೆಂಕಿ: ತೋಟಗಳು ಹಾನಿ

01:29 PM Feb 08, 2021 | Team Udayavani |

ನಂಜನಗೂಡು: ತಾಲೂಕಿನ ಕೊಣನೂರು ವ್ಯಾಪ್ತಿಯ ಕುರುಚಲು ಕಾಡಿಗೆ ಭಾನುವಾರ ಬೆಂಕಿ ಬಿದ್ದ ಪರಿಣಾಮ ಅಲ್ಲಿದ್ದ ವನ ಸಿರಿ ಸುಟ್ಟು ಕರುಕಲಾಗಿದೆ.

Advertisement

ಕೊಣನೂರು ಹನುಮನಪುರ ಬಳಿ ಇರುವ ಕುರುಚಲು ಪಲ್ಲಿಯಲ್ಲಿ ಕಿಚ್ಚು ಕಾಣಿಸಿಕೊಂಡಿದ್ದು, ಈ  ಕಾಡಿಗೆ ಹೊಂದಿಕೊಂಡಿರುವ ರೈತರ ಹಣ್ಣಿನ ತೋಟ, ಗೋಮಾಳ ಸೇರಿದಂತೆ ನೂರಾರು ಎಕರೆ ಪ್ರದೇಶಕ್ಕೆ ಬೆಂಕಿ ತಗುಲಿದೆ.  ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

  ಇದನ್ನೂ ಓದಿ : ಡಾ|ರಾಜ್‌ ತವರು ತಾಲೂಕಿನ ಟ್ಯಾಕೀಸ್‌ಗಳ ಸ್ಥಿತಿಗತಿ

ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪಕ್ಕದ ಕೃಷ್ಣ ಮೃಗದ ವಿಹಾರ ಧಾಮಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚದಂತೆ ನಂದಿಸುವಲ್ಲಿ ಯಶಸ್ವಿಯಾದರು. ಈ ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಒಟ್ಟಾರೆ ಕಿರು ಕಾಡಿನ ಪ್ರದೇಶಕ್ಕೆ ಹೊಂದಿಕೊಂಡಿದ್ದ ರೈತರ ನೆಲ್ಲಿ, ಮಾವು, ಹುಣಸೆ, ಗೊಂಡಂಬಿ ಮರಗಿಡಗಳು ಬೆಂಕಿಗೆ ಆಹುತಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next