Advertisement

ಕೋಲ್ಕತದ ತರತಾಲಾ ಪ್ರದೇಶದಲ್ಲಿ ಬೆಂಕಿ: 6 ಅಂಗಡಿ ಭಸ್ಮ

11:06 AM Feb 15, 2019 | udayavani editorial |

ಕೋಲ್ಕತ : ನಗರದ ತರತಾಲಾ ಪ್ರದೇಶದಲ್ಲಿ ಇಂದು ಶುಕ್ರವಾರ ಬೆಂಕಿ ಅವಘಡ ಸಂಭವಿಸಿ ಸುಮಾರು ಆರು ಅಂಗಡಿ ಮುಂಗಟ್ಟುಗಳು ಸುಟ್ಟು ಕರಕಲಾದವು; ಆದರೆ ಯಾವುದೇ ಜೀವ ಹಾನಿ, ಗಾಯ ಉಂಟಾಗಿಲ್ಲ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ತರತಾಲಾ ಪ್ರದೇಶದಲ್ಲಿ ಸಿಇಎಸ್‌ಸಿ ಕಚೇರಿಗೆ ಸಮೀಪದ ರಸ್ತೆ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡು, ತಿಂಡಿ ತಿನಸಿನ ಆರು ಅಂಗಡಿಗಳು ಅವಘಡದಲ್ಲಿ ನಾಶವಾದವು. 

ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳಕ್ಕೆ ನಾಲ್ಕು ಅಗ್ನಿ ಶಾಮಕಗಳು ಧಾವಿಸಿ ಬಂದು ಬೆಂಕಿಯನ್ನು ನಿಯಂತ್ರಿಸಿದವು ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ. ಬೆಂಕಿ ಹೇಗೆ ಕಾಣಿಸಿಕೊಂಡಿತೆಂಬುದು ಗೊತ್ತಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next