Advertisement

ಅಳದಂಗಡಿ: ಎಣ್ಣೆ ಗಿರಣಿ  ಬೆಂಕಿಗಾಹುತಿ

05:42 AM Dec 29, 2018 | Team Udayavani |

ವೇಣೂರು: ಎಣ್ಣೆ ಗಿರಣಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಬೆಂಕಿಗಾಹುತಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಗುರುವಾರ ತಡರಾತ್ರಿ  ಸಂಭವಿಸಿದೆ.

Advertisement

ಒಂದೂವರೆ ಗಂಟೆ  ಸುಮಾರಿಗೆ ಅಳದಂಗಡಿಯ ಏರ್‌ಟೆಲ್‌ ಟವರ್‌ ಕೆಳಗಿರುವ ಜಿನೇಂದ್ರ ಅವರಿಗೆ ಸೇರಿದ ಎಣ್ಣೆಮಿಲ್ಲಿನಿಂದ ಹೊಗೆ ಕಾಣಿಸಿದ್ದು, ಕೆಲವೇ ಹೊತ್ತಿನಲ್ಲಿ ಬೆಂಕಿಯು ಸಂಪೂರ್ಣ ಕಟ್ಟಡವನ್ನು ವ್ಯಾಪಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯರಿಂದ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಬಂದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಆದರೆ  ಕೊಬ್ಬರಿ, ಎಣ್ಣೆ, ಗೆರಟೆ ಇತ್ಯಾದಿಗಳ ಸಂಗ್ರಹ ಇದ್ದುದರಿಂದ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ ಎನ್ನಲಾಗಿದೆ. ಅಗ್ನಿಶಾಮಕ ಯಂತ್ರದಲ್ಲಿದ್ದ ನೀರು ಮುಗಿದ ಬಳಿಕ ಆಸುಪಾಸಿನ ಮನೆಗಳಿಂದ ನೀರು ತಂದು ಬೆಂಕಿಯನ್ನು ನಂದಿಸಲಾಯಿತು. ಅಗ್ನಿಶಾಮಕ ದಳದವರ ತ್ವರಿತ ಕಾರ್ಯಾ ಚರಣೆಯಿಂದಾಗಿ ಬೆಂಕಿಯು ಇತರ ಅಂಗಡಿ, ಮನೆಗಳಿಗೆ ವ್ಯಾಪಿಸುವುದು ತಪ್ಪಿದಂತಾಗಿದೆ.

ಕಟ್ಟಡದಲ್ಲಿದ್ದ ಕೊಬ್ಬರಿ ಹಿಂಡುವ ಯಂತ್ರೋಪಕರಣಗಳು ಸಹಿತ ಎಲ್ಲ ವಸ್ತು ಗಳು ಸುಟ್ಟು ಹೋಗಿವೆ.  ಸುಮಾರು 15 ಲ. ರೂ.  ನಷ್ಟ ಅಂದಾಜಿಸಲಾಗಿದೆ. ಘಟನೆಗೆ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಕಾರಣ ಎಂದು ಹೇಳಲಾಗುತ್ತಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next