Advertisement

ಪಡುಬೆಳ್ಳೆ: ಬೆಂಕಿ ಆಕಸ್ಮಿಕ

12:04 AM May 16, 2019 | sudhir |

ಶಿರ್ವ: ಪಡುಬೆಳ್ಳೆ ಕಂಬÛತೋಟ, ಬೆಳ್ಳೆ ಅಂಗಡಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ವೇಳೆ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಸುಮಾರು 15 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ.

Advertisement

ಪಾಪನಾಶಿನಿ ನದಿ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕುರುಚಲು ಗಿಡ, ಪೊದೆ, ಮುಳಿಹುಲ್ಲು, ಗಿಡಗಂಟಿಗಳು ಇದ್ದುದರಿಂದ ಬೆಂಕಿ ಶೀಘ್ರ ವ್ಯಾಪಿಸಿದೆ. ಕುರ್ಕಾಲು ಮತ್ತು ಬೆಳ್ಳೆ ಗ್ರಾಪಂ ವ್ಯಾಪ್ತಿಯ ಈ ಪ್ರದೇಶದಲ್ಲಿ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬಂದಿ ಪ್ರಯತ್ನದಿಂದ ಬೆಂಕಿಯನ್ನು ನಂದಿಸಲಾಯಿತು.

ಶಿರ್ವ ಪಿಎಸ್‌ಐ ಅಬ್ದುಲ್‌ ಖಾದರ್‌ ಪೊಲೀಸ್‌ ಸಿಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿ¨ª‌ರು. ಬೆಳ್ಳೆಮಧ್ವರಾಯ ಭಟ್‌, ವಿಶ್ವನಾಥ ಶೆಟ್ಟಿ, ಅಜಿತ್‌ ಶೆಟ್ಟಿ, ಸುದರ್ಶನ್‌ ರಾವ್‌, ಪುಂಡರೀಕಾಕ್ಷ ಭಟ್‌, ಗುರುರಾಜ್‌ ಭಟ್‌, ಸ್ಥಳೀಯ ಯುವಕರು ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next