Advertisement
ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ವಿರೋಧಿಸಿ ಭಾನುವಾರ ಮೌರ್ಯ ವೃತ್ತದ ಬಳಿ ನಡೆದ ಪ್ರತಿಭಟನೆ ವೇಳೆ ಪ್ರಮೋದ್ ಮುತಾಲಿಕ್, ನಮ್ಮ ರಕ್ತ ಚೆಲ್ಲಿಯಾದರೂ ಚಿಂತೆಯಿಲ್ಲ, ಇನ್ನು ಮುಂದೆ ಕೃಷ್ಣಮಠ ಸೇರಿದಂತೆ ಯಾವುದೇ ದೇವಸ್ಥಾನಗಳಲ್ಲಿ ಇಫ್ತಾರ್ ಕೂಟ ನಡೆಯಲು ಬಿಡುವುದಿಲ್ಲ. ಒಂದು ವೇಳೆ ಇಫ್ತಾರ್ ಕೂಟನಡೆಸಲು ಮುಂದಾದರೆ ರಕ್ತಪಾತವಾಗುತ್ತದೆ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರಿನ್ವಯ ಎಫ್ ಐಆರ್ ದಾಖಲಿಸಲಾಗಿದೆ.