Advertisement

ಮುತಾಲಿಕ್‌ ವಿರುದ್ಧ ಎಫ್ಐಆರ್‌ 

03:45 AM Jul 04, 2017 | |

ಬೆಂಗಳೂರು: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿ ಶ್ರೀರಾಮಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ವಿರುದ್ಧ  ಹೈಗ್ರೌಂಡ್ಸ್‌ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

Advertisement

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆದ ಇಫ್ತಾರ್‌ ಕೂಟ ವಿರೋಧಿಸಿ ಭಾನುವಾರ ಮೌರ್ಯ ವೃತ್ತದ ಬಳಿ ನಡೆದ ಪ್ರತಿಭಟನೆ ವೇಳೆ ಪ್ರಮೋದ್‌ ಮುತಾಲಿಕ್‌, ನಮ್ಮ ರಕ್ತ ಚೆಲ್ಲಿಯಾದರೂ ಚಿಂತೆಯಿಲ್ಲ, ಇನ್ನು ಮುಂದೆ ಕೃಷ್ಣಮಠ ಸೇರಿದಂತೆ ಯಾವುದೇ ದೇವಸ್ಥಾನಗಳಲ್ಲಿ ಇಫ್ತಾರ್‌ ಕೂಟ ನಡೆಯಲು ಬಿಡುವುದಿಲ್ಲ. ಒಂದು ವೇಳೆ ಇಫ್ತಾರ್‌ ಕೂಟ
ನಡೆಸಲು ಮುಂದಾದರೆ ರಕ್ತಪಾತವಾಗುತ್ತದೆ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರಿನ್ವಯ ಎಫ್ ಐಆರ್‌ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next