Advertisement

ಬ್ರಹ್ಮಾವರ: ಬೆಳ್ಳಂಬೆಳಗ್ಗೆ ಕುಡಿದ ಮತ್ತಿನಲ್ಲಿ ಇರಿದು ಕೊಲೆ 

12:19 PM Mar 01, 2017 | |

ಬ್ರಹ್ಮಾವರ : ಇಲ್ಲಿನ ಪೇತ್ರಿಯ ಪೇಟೆಯಲ್ಲೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಇರಿದು ಕೊಲೆಗೈದ ಘಟನೆ ಬುಧವಾರ ಬೆಳಗ್ಗೆ 10 ಗಂಟೆಯ ವೇಳೆ ನಡೆದಿದೆ. 

Advertisement

ಕನ್ನಾರು ನಿವಾಸಿ  ಪ್ರಕಾಶ ನಾಯ್ಕ(40) ಎಂಬ ಯುವಕನನ್ನು ರೌಡಿಶೀಟರ್‌ ಆಗಿರುವ ಪ್ರಶಾಂತ್‌ ಕುಲಾಲ್‌ ಎಂಬಾತ ಇರಿದು ಹತ್ಯೆಗೈದಿದ್ದಾನೆ. ಪ್ರಶಾಂತ್‌ ಹಲವು ಪ್ರಕರಣಗಳಲ್ಲಿ  ಭಾಗಿಯಾಗಿದ್ದ. 

ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next