Advertisement

ಗ್ರಾಹಕರಿಗೆ ತೊಂದರೆ: ಬ್ಯಾಂಕಿಗೆ ದಂಡ! ಜಿಲ್ಲಾ ಗ್ರಾಹಕ ನ್ಯಾಯಾಲಯದಿಂದ ತೀರ್ಪು

07:06 PM Oct 27, 2020 | sudhir |

ಉಡುಪಿ: ಬ್ಯಾಂಕಿನ ಅಚಾತುರ್ಯದಿಂದಾಗಿ ಗ್ರಾಹಕರೊಬ್ಬರಿಗೆ ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೂಲಕ ಗ್ರಾಹಕರಿಗೆ ನ್ಯಾಯ ಸಿಕ್ಕಿದೆ.

Advertisement

ಉಡುಪಿ ಜಿಲ್ಲೆಯ ಬಡಗುಬೆಟ್ಟು ಗ್ರಾಮದ ಕೆ. ಅನಂತ ಭಟ್‌ ಅವರು ಬ್ರಹ್ಮಗಿರಿಯ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು. ತನ್ನ ಖಾತೆಯಲ್ಲಿ ಜಮೆಯಾಗಿರುವ 5 ಲ.ರೂ. ಮೊತ್ತವನ್ನು ಬ್ಯಾಂಕಿಗೆ ನಗದೀಕರಣಕ್ಕಾಗಿ ಹೋದಾಗ ಬ್ಯಾಂಕಿನ ಸಿಬಂದಿ ಅದರಲ್ಲಿರುವ ಅರ್ಧಾಂಶ ಹಣವನ್ನು ನಗದೀಕರಿಸಿದ ಅನಂತರ ತಪ್ಪು ತಿಳುವಳಿಕೆಯಿಂದ ನಿಮ್ಮ ಖಾತೆಯಲ್ಲಿ ಹಣ ಜಮಾವಣೆಯಾಗಿದೆ. ನಿಮ್ಮ ಖಾತೆಯಲ್ಲಿರುವ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ಉತ್ತರಿಸಿ ಅನಂತ ಭಟ್‌ ಅವರು ಬೇರೆಯವರಿಗೆ ನೀಡಿದ ಚೆಕ್‌ ಅನ್ನು ಉದ್ದೇಶಪೂರಿತವಾಗಿ ಅಮಾನ್ಯ ಮಾಡಿದ್ದರು.

ಈ ಬಗ್ಗೆ ಅನಂತ ಭಟ್‌ ಅವರು ಉಡುಪಿ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದು, ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿ ಹಿರಿಯ ನಾಗರಿಕ ಅನಂತ ಭಟ್‌ ಅವರಿಗೆ ಅವರ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಹಿಂತಿರುಗಿಸುವಂತೆ ಮತ್ತು ಪರಿಹಾರ ಮೊತ್ತವಾಗಿ 1 ಲ.ರೂ. ಹಾಗೂ 15,000 ರೂ. ದಾವೆಯ ಖರ್ಚು ಕೊಡಬೇಕು ಎಂದು ಆದೇಶ ಮಾಡಿದೆ. ಅರ್ಜಿದಾರರ ಪರ ಚೇರ್ಕಾಡಿ ಅಖೀಲ್‌ ಬಿ. ಹೆಗ್ಡೆ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next