Advertisement

ತುರ್ತು ಪರಿಸ್ಥಿತಿಯ ಬಗ್ಗೆಯೂ ಸಿನೆಮಾವಾಗಲಿ

12:18 AM Mar 18, 2022 | Team Udayavani |

ಲಕ್ನೋ: ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ಮಾಡಲಾಗಿ ರುವ “ದಿ ಕಾಶ್ಮೀರ್‌ ಫೈಲ್ಸ್‌’ ಸಿನೆಮಾದ ರೀತಿಯಲ್ಲೇ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿ, ಮುಲಾಯಂ ಸಿಂಗ್‌ ಯಾದವ್‌ ಆಡಳಿತದ ಅವಧಿಯಲ್ಲಿ ರಾಮ ಭಕ್ತರ ಮೇಲೆ ನಡೆದ ಗುಂಡಿನ ದಾಳಿ ಬಗ್ಗೆಯೂ ಸಿನೆಮಾ ಮಾಡಬೇಕು ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದ ಮುಕೇಶ್‌ ರಜಪೂತ್‌ ಹೇಳಿದ್ದಾರೆ.

Advertisement

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು “ದಿ ಕಾಶ್ಮೀರ್‌ ಫೈಲ್ಸ್‌’ ಸಿನೆಮಾ ವೀಕ್ಷಿಸಿದ್ದಾರೆ. ಅನಂತರ ಮಾತನಾಡಿದ ಅವರು, “ಈ ಸಿನೆಮಾ ಅರ್ಧ ಸತ್ಯವನ್ನು ಮಾತ್ರ ಹೇಳುತ್ತದೆ. ಸಿನೆಮಾದಲ್ಲಿ ಬರೀ ಕ್ರೂರತೆಯೇ ಇದೆ. ಅದರಿಂದ ಕಲಿಯುವಂಥದ್ದು ಏನೂ ಇಲ್ಲ’ ಎಂದಿದ್ದಾರೆ.

ಹ್ಯಾಕರ್‌ಗಳ ಕೈಚಳಕ: ಸಿನೆಮಾ ದೇಶಾದ್ಯಂತ ಪ್ರಚಾರ ಪಡೆಯುತ್ತಿದ್ದಂತೆಯೇ ಕೆಲವು ಹ್ಯಾಕರ್‌ಗಳು ಸಿನೆಮಾದ ಪ್ರಚಾರವನ್ನು ದುರ್ಬಳಕೆ ಮಾಡಿಕೊಳ್ಳಲಾರಂಭಿಸಿದ್ದಾರೆ. “ದಿ ಕಾಶ್ಮೀರ್‌ ಫೈಲ್ಸ್‌’ ಸಿನೆಮಾಕ್ಕೆ ಫ್ರೀ ಅಕ್ಸೆಸ್‌ ಎಂದು ಯಾವುದೋ ಲಿಂಕ್‌ ಕಳುಹಿಸಲು ಆರಂಭಿಸಿ ದ್ದಾರೆ. ಅದನ್ನು ಜನರು ಕ್ಲಿಕ್‌ ಮಾಡಿದಾಕ್ಷಣ, ಅವರ ಖಾತೆಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ನೋಯ್ಡಾದ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಈ ಸಿನೆಮಾ ಹೆಸರಿನಲ್ಲಿ ಸೈಬರ್‌ ಕಳ್ಳರು 30 ಲಕ್ಷ ರೂ. ಲೂಟಿ ಮಾಡಿರುವುದಾಗಿ ದೂರು ಬಂದಿದೆಯೆಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next