Advertisement

Movie ಬಿಡುಗಡೆಯಾದ 7 ದಿನಗಳ ನಂತರ ವಿಮರ್ಶೆ ಪ್ರಕಟಿಸಿ: ಕೇರಳ ಹೈಕೋರ್ಟ್‌

10:33 PM Oct 09, 2023 | Shreeram Nayak |

ಕೊಚ್ಚಿ: ಸಿನಿಮಾ ಬಿಡುಗಡೆಯಾದ ಏಳು ದಿನಗಳ ನಂತರವಷ್ಟೇ ಚಿತ್ರದ ಕುರಿತಾದ ವಿಮರ್ಶೆಯನ್ನು ಪ್ರಕಟಿಸಬೇಕು ಎಂದು ಕೇರಳ ಹೈಕೋರ್ಟ್‌ ಆದೇಶಿಸಿದೆ.

Advertisement

“ಅರೋಮಲಿಂತೆ ಅದ್ಯತೆ ಪ್ರಣಯಂ’ ಸಿನಿಮಾದ ನಿದೇರ್ಶಕ ಮುಬಿನ್‌ ರೌಫ್ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ, ಆರಂಭಿಕ ನಕಾರಾತ್ಮಕ ವಿಮರ್ಶೆಯಿಂದ ಜನರಿಗೆ ಸಿನಿಮಾ ತಲುಪುವುದನ್ನು ತಪ್ಪಿಸುವುದರಿಂದ ಪಾರು ಮಾಡಲು ಈ ಆದೇಶ ಹೊರಡಿಸಿದೆ. ಹಲವರ ಸಾಮೂಹಿಕ ಶ್ರಮದಿಂದ ನಿರ್ಮಿಸಿರುವ ಸಿನಿಮಾವನ್ನು ಬೌದ್ಧಿಕ ಆಸ್ತಿ ಎಂದು ಕರೆದಿರುವ ನ್ಯಾಯಪೀಠ, ಇದೇ ವೇಳೆ ಸಿನಿಮಾ ಕುರಿತು ನಕಾರಾತ್ಮಕತೆಯನ್ನು ಸೃಷ್ಟಿಸುವುದರ ವಿರುದ್ಧ ತನಿಖೆಗೆ ಆದೇಶಿಸಿದೆ.

“ಮೊದಲ ದಿನವೇ ಚಿತ್ರದ ಕುರಿತು ನಕಾರಾತ್ಮಕ ವಿಮರ್ಶೆಯನ್ನು ಪ್ರಕಟಿಸುವುದರಿಂದ, ಸಿನಿಮಾ ಕುರಿತು ಜನರಿಗೆ ನಿರುತ್ಸಾಹ ಮೂಡಿಸಬಹುದು. ಅಲ್ಲದೇ ಸಕಾರಾತ್ಮಕ ವಿಮರ್ಶೆಗಾಗಿ ಆನ್‌ಲೈನ್‌ ಬ್ಲಾಗರ್ಸ್‌ನಿಂದ ಹಣಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ಇದು ಸಿನಿಮಾ ಕ್ಷೇತ್ರದಲ್ಲಿ ಶೋಷಣೆಯ ವಾತಾವರಣವನ್ನು ಸೃಷ್ಟಿಸಿದೆ’ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖೀಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next